ಸಾಲಬಾಧೆ ತಾಳಲಾರದೆ ಕೆರೆಗೆ ಹಾರಿದ ತಂದೆ..ರಕ್ಷಿಸಲು ಹೋದ ಮಗನೂ ಸಾವು!

1:38 PM, Thursday, November 22nd, 2018
Share
1 Star2 Stars3 Stars4 Stars5 Stars
(No Ratings Yet)
Loading...

suicideಚಿಕ್ಕಮಗಳೂರು: ಸಾಲಬಾಧೆ ತಾಳಲಾರದೆ ತಂದೆ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ರಕ್ಷಿಸಲು ಹೋದ ಮಗ ಕೂಡಾ ತಂದೆ ಜೊತೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಎನ್.ಆರ್. ಪುರ ತಾಲೂಕಿನಲ್ಲಿ ನಡೆದಿದೆ.

ತಂದೆ ತಿಮ್ಮಣ್ಣಗೌಡ (55) ಹಾಗೂ ಮಗ ಅಭಿಷೇಕ್ (24) ಸಾವನ್ನಪ್ಪಿದವರು ಎನ್ನಲಾಗಿದೆ. ಇವರಿಗೆ ಎನ್.ಆರ್.ಪುರದ ಹಂತುವಾನಿ ಗ್ರಾಮದಲ್ಲಿ 2 ಎಕರೆ ಜಾಗವಿದ್ದು, ಅಡಿಕೆ ಮತ್ತು ಭತ್ತ ಬೆಳೆಯುತ್ತಿದ್ದರು. ತಮ್ಮ ಜಮೀನಿನಲ್ಲಿ 10ಕ್ಕೂ ಹೆಚ್ಚು ಬೋರ್ವೆಲ್ ಕೊರೆಯಿಸಿದ್ದರು. ಆದರೆ ಬೋರ್ವೆಲ್ನಲ್ಲಿ ನೀರು ಬಂದಿರಲಿಲ್ಲ. ಅಲ್ಲದೇ ಬ್ಯಾಂಕ್ವೊಂದರಲ್ಲಿ ಮೂರು ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

ಹೀಗೆ ಸಾಲ ತೀರಿಸಲು ಸಾಧ್ಯವಿಲ್ಲ ಎಂದು ತಂದೆಯು ಮಕ್ಕಳ ಬಳಿ ಹೇಳಿಕೊಂಡಿದ್ದಾರೆ. ನಂತರ ರಾತ್ರಿ ಮನೆಯಿಂದ ಕೂಗಳತೆ ದೂರದಲ್ಲಿರುವ ಕೆರೆಗೆ ಹಾರಿ ತಂದೆ ತಿಮ್ಮಣ್ಣಗೌಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಗ ಮಗ ಅಭಿಷೇಕ್ ತಂದೆಯನ್ನು ಉಳಿಸಲು ಕೆರೆಗೆ ಹಾರಿದ್ದಾನೆ. ಆದರೆ ಇಬ್ಬರಿಗೂ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಎನ್.ಆರ್. ಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English