ನವೆಂಬರ್ 24 ರಂದು ಅನಂತಕುಮಾರ್ ವೈಕುಂಠ ಸಮಾರಾಧನೆ

3:37 PM, Friday, November 23rd, 2018
Share
1 Star2 Stars3 Stars4 Stars5 Stars
(No Ratings Yet)
Loading...

ananth-bjpಬೆಂಗಳೂರು: ಇತ್ತೀಚಿಗೆ ಅಗಲಿದ ಕೇಂದ್ರ ಸಚಿವ ಅನಂತಕುಮಾರ್ ಅವರ ವೈಕುಂಠ ಸಮಾರಾಧನೆಯನ್ನು ನವೆಂಬರ್ 24 ರಂದು ಬೆಂಗಳೂರಿನ ಪಂಪ ಮಹಾಕವಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ, ಉತ್ತರಾದಿ ಮಠದಲ್ಲಿ ಆಯೋಜಿಸಲಾಗಿದೆ.

ದುಃಖದ ಸಂಧರ್ಭದಲ್ಲಿ ಲಕ್ಷಾಂತರ ಜನರು ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದ್ದಾರೆ. ಸಮಯದ ಅಭಾವದ ಕಾರಣ ಈ ಎಲ್ಲಾ ಜನರನ್ನು ತಲುಪುವುದು ಸಾಧ್ಯವಾಗುತ್ತಿಲ್ಲ. ಅನಂತಕುಮಾರ್ ಅವರ ಒಡನಾಡಿಗಳು ಹಾಗೂ ಸಾರ್ವಜನಿಕರಿಗೆ ವೈಕುಂಠ ಸಮಾರಾಧನೆಯ ಮಾಹಿತಿಯನ್ನು ತಿಳಿಸುವ ದೃಷ್ಟಿಯಿಂದ, ತಮ್ಮ ಮಾಧ್ಯಮದ ಮೂಲಕ ಈ ಮಾಹಿತಿಯನ್ನು ಪ್ರಕಟಿಸುವಂತೆ ಕುಟುಂಬ ವರ್ಗದವರು ವಿನಂತಿಸಿಕೊಂಡಿದ್ದಾರೆ.

ವೈಕುಂಠ ಸಮಾರಾಧನೆಯಲ್ಲಿ ವಿವಿಧ ಕ್ಷೇತ್ರದ ಪ್ರಮುಖರು, ಕುಟುಂಬ ವರ್ಗದವರು ಹಾಗೂ ಅನಂತಕುಮಾರ್ ಅವರ ಒಡನಾಡಿಗಳು ಭಾಗವಹಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಶ್ರದ್ಧಾಂಜಲಿ ಸಭೆ ನಡೆಯಲಿದ್ದು, ಮಧ್ಯಾಹ್ನ 12.30 ಕ್ಕೆ ಪ್ರಸಾದವನ್ನು ಆಯೋಜಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English