ಅಯೋಧ್ಯೆಯಲ್ಲಿ ನಡೆದಿದ್ದು ಧರ್ಮ ಸಭೆಯಲ್ಲ.. ಅದು ರಾಜಕೀಯ ಸಭೆ: ಮಹೇಂದ್ರ ಕುಮಾರ್​

10:18 AM, Monday, December 3rd, 2018
Share
1 Star2 Stars3 Stars4 Stars5 Stars
(No Ratings Yet)
Loading...

mangloreಮಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಯಾವುದೇ ಅಡೆತಡೆಗಳಿಲ್ಲ, ಆದರೂ ಮಂದಿರ ಕಟ್ಟುತ್ತಿಲ್ಲ. ಅಯೋಧ್ಯೆಯಲ್ಲಿ ನಡೆದಿದ್ದು ಧರ್ಮ ಸಭೆಯಲ್ಲ. ಅದು ರಾಜಕೀಯ ಸಭೆ ಎಂದು ನಿರ್ಮೋಹಿ ಅಖಾಡದ ಗುರುಗಳು ಹೇಳಿದ್ದಾರೆ.

ನಗರದ ನಂತೂರಿನಲ್ಲಿ‌ ಅಭಿಮತ ಮಂಗಳಾ ಆಯೋಜಿಸಿದ್ದ ಜನನುಡಿ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಂದಿರ ಕಟ್ಟುವುದಕ್ಕೆ ಯಾರ ವಿರೋಧವೂ ಇಲ್ಲವೆಂದು ಅಯೋಧ್ಯೆಯ ಅನ್ಸಾರಿ ಹೇಳಿದ್ದಾರೆ. ಏಕೆಂದರೆ ಇದು ರಾಜಕೀಯ ಪ್ರೇರಿತ ಕುತಂತ್ರ ಎಂದು ನಮ್ಮ ಧ್ವನಿ ಸಂಘಟನೆಯ ಮಹೇಂದ್ರ ಕುಮಾರ್ ಆರೋಪಿಸಿದರು.

ನರೇಂದ್ರ ಮೋದಿಯವರು ಎಲ್ಲಾ ವಿಷಯಗಳಲ್ಲೂ ಸೋಲು ಕಂಡಾಗ, ಯಾವುದನ್ನು ಜನರ ಮುಂದೆ ತೆಗೆದುಕೊಂಡು ಹೋಗದಿದ್ದಾಗ, ಇವರ ಬತ್ತಳಿಕೆಯಲ್ಲಿ ಬಾಣಗಳು ಖಾಲಿಯಾದಾಗ ಅಯೋಧ್ಯೆ ವಿಚಾರವನ್ನು ಮುನ್ನಲೆಗೆ ತರುತ್ತಾರೆ ಎಂದು ಮಹೇಂದ್ರಕುಮಾರ್ ಕಿಡಿಕಾರಿದರು.

ಈ ಹಿನ್ನೆಲೆಯಲ್ಲಿ ನಾವು ಜಾಗರೂಕರಾಗಿರಬೇಕು. ಗಂಭೀರವಾದ ಯೋಜನೆಗಳನ್ನು ಮಾಡಬೇಕು. ಇಲ್ಲಿರುವ ಪ್ರತಿಯೊಬ್ಬರಿಗೂ ಅಪರಿಮಿತವಾದ ಶಕ್ತಿಯಿದೆ. ನೀವೆಲ್ಲಾ ಒಂದಾಗಬೇಕು. ನಿಮ್ಮ ಒಳಗಿನ ಅಹಂ ಅನ್ನು ಬದಿಗಿಟ್ಟು ಒಟ್ಟಾಗಿ ಎಂದು ಎಡಪಂಥೀಯ ಚಿಂತಕರನ್ನು ಸೂಕ್ಷ್ಮವಾಗಿ ಎಚ್ಚರಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English