ಮಂಗಳೂರು: ಇತ್ತೀಚೆಗೆ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಮಂಗಳೂರಿನ ತೋಟ ಬೆಂಗ್ರೆಯ ಪ್ರಗತಿ ಮೈದಾನದ ಬಳಿ ಗಾಂಜಾ ಸೇವಿಸುತ್ತಿದ್ದ ಆರೋಪಿವೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಬಿಜೈ ಚರ್ಚ್ ರೋಡ್ ಸಮೀಪದ ಎರಿಲ್ ಪಿರೇರಾ(28) ಬಂಧಿತ ಆರೋಪಿ.
ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ ಆರ್ ಸುರೇಶ್, ಉಪ ಪೊಲೀಸ್ ಆಯುಕ್ತ (ಕಾ&ಸು) ಹನುಮಂತರಾಯ, ಉಪ ಪೊಲೀಸ್ ಆಯುಕ್ತೆ (ಅಪರಾಧ ಮತ್ತು ಸಂಚಾರ) ಉಮಾ ಪ್ರಶಾಂತ, ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಂ.ಮಂಜುನಾಥ ಶೆಟ್ಟಿ ಇವರ ಮಾರ್ಗದರ್ಶನದಂತೆ ಪಣಂಬೂರು ಠಾಣಾ ಪಿಎಸ್ಐ ರಫೀಕ್ ಕೆ.ಎಂ ನೇತೃತ್ವದಲ್ಲಿ ಪಿ.ಎಸ್.ಐ(ಕಾ.ಸು) ಶ್ರೀ ಉಮೇಶ್ ಕುಮಾರ್.ಎಂ.ಎನ್ ಹಾಗೂ ಸಿಬ್ಬಂದಿ ಶ್ರಮಿಸಿರುತ್ತಾರೆ.
Click this button or press Ctrl+G to toggle between Kannada and English