ಕಾಂಗ್ರೆಸ್‌ನ ವಿಜಯವು ದ್ವೇಷ ರಾಜಕಾರಣದ ವಿರುದ್ದ ಸಾಧಿಸಲಾಗಿರುವ ಗೆಲುವಾಗಿದೆ: ರಾಹುಲ್‌ ಗಾಂಧಿ

1:11 PM, Wednesday, December 12th, 2018
Share
1 Star2 Stars3 Stars4 Stars5 Stars
(No Ratings Yet)
Loading...

rahul-gandhiಹೊಸದಿಲ್ಲಿ: ಪಂಚರಾಜ್ಯ ಚುನಾವಣಾ ಫ‌ಲಿತಾಂಶದಿಂದ ಜನರಿಗೆ ಪ್ರಧಾನಿ ಮೋದಿ ಅವರಲ್ಲಾಗಲೀ ಬಿಜೆಪಿಯಲ್ಲಾಗಲೀ ಈಗ ವಿಶ್ವಾಸ ಉಳಿದಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ವಿಜಯ ಸಾಧಿಸಿದ್ದು ಈ ಮೂರೂ ಹಿಂದಿ ರಾಜ್ಯಗಳಲ್ಲಿ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ.

ಕಾಂಗ್ರೆಸ್‌ ಗೆ ಮೂರು ಪ್ರಮುಖ ರಾಜ್ಯಗಳಲ್ಲಿ ದೊರಕಿರುವ ಯಶಸ್ಸು 2019ರ ಲೋಕಸಭೆ ಚುನಾವಣೆಗೆ ಹೊಸ ಹುಮ್ಮಸ್ಸು, ಧೈರ್ಯವನ್ನು ತುಂಬಿದೆ. ವಿರೋಧ ಪಕ್ಷಗಳೆಲ್ಲ ಒಗ್ಗಟ್ಟಿನಿಂದ ಕೈಜೋಡಿಸಿದರೆ ಬಿಜೆಪಿಯನ್ನು ಹಣಿಯಲು ಸಾಧ್ಯ ಎಂಬುದೀಗ ಸಾಬೀತಾಗಿದೆ. ಕಾಂಗ್ರೆಸ್‌ನ ಈ ಮಹಾ ವಿಜಯವು ದ್ವೇಷ ರಾಜಕಾರಣದ ವಿರುದ್ದ ಸಾಧಿಸಲಾಗಿರುವ ಗೆಲುವಾಗಿದೆ ಎಂದು ರಾಹುಲ್‌ ಹೇಳಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English