ವೈಭವದ ಕರಾವಳಿ ಉತ್ಸವ: ವಸ್ತು ಪ್ರದರ್ಶನಕ್ಕೆ ಸಂಗೀತ ನಿರ್ದೇಶಕ ಗುರುಕಿರಣ್ ಚಾಲನೆ

12:55 PM, Saturday, December 22nd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

gurukiranಮಂಗಳೂರು: ದ‌.ಕ. ಜಿಲ್ಲಾಡಳಿತದ ವತಿಯಿಂದ ನಡೆಯುವ ವೈಭವದ ಕರಾವಳಿ ಉತ್ಸವದ ವಸ್ತು ಪ್ರದರ್ಶನಕ್ಕೆ ಸಂಗೀತ ನಿರ್ದೇಶಕ ಗುರುಕಿರಣ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕರಾವಳಿ ಅಂದರೆ ಎಲ್ಲರಿಗೂ ಎಲ್ಲರ ಪರಿಚಯ ಇರುತ್ತದೆ. ಎಲ್ಲರಿಂದಲೂ ಸಹಾಯ ಕೇಳುತ್ತಾರೆ. ಸಹಾಯ ಮಾಡುತ್ತಾರೆ. ಸಚಿವ ಯು.ಟಿ. ಖಾದರ್ ಮತ್ತು ನಾನು ಶಾಲೆಗೆ ಒಟ್ಟಿಗೆ ಹೋಗುತ್ತಿದ್ದೆವು. ಮೇಯರ್ ಭಾಸ್ಕರ ಕೆ. ನಮ್ಮ ಊರಿನವರು. ನಾವು ಯಾವಾಗಲೂ ಜೊತೆಗಿರುತ್ತಿದ್ದೆವು. ಮನೋಹರ ಪ್ರಸಾದ್ ಅವರು ನನ್ನ ಮೊದಲ ಸಿನಿಮಾ ಬದ್ಕೊಂಜಿ ಕಬಿತೆಗೆ ಅವರೇ ಮುಹೂರ್ತ ಮಾಡಿದವರು ಎಂದು ಹೇಳಿದರು.

gurukiran-2ಇವತ್ತು ಇಲ್ಲಿ ಇಡೀ ಕರ್ನಾಟಕದ ದರ್ಶನವಾಯಿತು. ನಾಡಿನ ವಿವಿಧ ಕಲಾ ಮೇಳಗಳ ಪ್ರದರ್ಶನ ಅದ್ಭುತವಾಗಿತ್ತು. ಈ ಕರಾವಳಿ ಉತ್ಸವಕ್ಕೆ ಶುಭಾಶಯಗಳು ಎಂದು ಹೇಳಿದರು. ಬಳಿಕ ಸಚಿವ ಯು.ಟಿ.ಖಾದರ್, ದ.ಕ. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮನಾಪ ಮೇಯರ್ ಭಾಸ್ಕರ ಕೆ. ಮಾತನಾಡಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English