ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ನಿಧನ: ಕಂಬನಿ‌ ಮಿಡಿದ ಡಿಸಿಪಿ ಅಣ್ಣಾಮಲೈ

12:33 PM, Saturday, December 29th, 2018
Share
1 Star2 Stars3 Stars4 Stars5 Stars
(No Ratings Yet)
Loading...

annamalaiಬೆಂಗಳೂರು: ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ನಿಧನಕ್ಕೆ ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ ಅಣ್ಣಾಮಲೈ ಕಂಬನಿ ಮಿಡಿದಿದ್ದಾರೆ.

ಮಧುಕರ್ ಶೆಟ್ಟಿ ನಿಧನ ನನಗೆ ಅಘಾತ ತಂದಿದೆ. ಅವ್ರ ಕುಟುಂಬಕ್ಕೆ ಶಾಂತಿ ಸಿಗಲಿ. ಒಬ್ಬ ದಕ್ಷ ಅಧಿಕಾರಿ ಈ ರೀತಿ ಸಿಗಲು ಸಾಧ್ಯವಿಲ್ಲ. ಅವರು ಚಿಕ್ಕಮಗಳೂರಿನಲ್ಲಿ ನೀಡಿದ ಸೇವೆ ಅಭೂತಪೂರ್ವ. ನನಗೆ ಈಗಲೂ ನೆನಪಿದೆ. ಚಿಕ್ಕಮಗಳೂರಿನಲ್ಲಿ ಭೂ ಒತ್ತುವರಿಯಾದಾಗ ಮಧುಕರ್ ಶೆಟ್ಟಿ ಒಂದು ಒಳ್ಳೆ ನಿರ್ಧಾರ ತೆಗೆದುಕೊಂಡಿದ್ದರು. ಅಲ್ಲದೆ ತಮ್ಮ ಜೊತೆ ಕೆಲಸ ಮಾಡುವ ಅಧಿಕಾರಿಗಳನ್ನು ಕೆಲವೊಮ್ಮೆ ತಮ್ಮ ಮನೆಯವ್ರಂತೆ ನೋಡಿಕೊಳ್ಳುತ್ತಿದ್ದರು. ಅವರ ಬಗ್ಗೆ ಎಷ್ಟು ಹಾಡಿ ಹೊಗಳಿದ್ರು ಸಾಲಲ್ಲ ಎಂದರು.

ಈ ವೇಳೆ ಡೈಲನ್ ಥಾಮಸ್ ಹೇಳಿದ್ದನ್ನ ನೆನೆದ ಅಣ್ಣಾಮಲೈ, “Rage, rage against the dying of the light and do not go gentle into the good night” ಎಂದರು. ನೀವು ಹಾಗೆ ಹೋಗಿಲ್ಲ, ನಮ್ಮೊಡನೆ ಮಾದರಿಯಾಗಿ ಹೋಗಿದ್ದೀರಾ. ನಿಮ್ಮ ನಿರ್ಧಾರ, ನಿಮ್ಮ ಆಲೋಚನೆಗಳನ್ನೆಲ್ಲಾ ನಮಗೆ ನೀಡಿ ಹೋಗಿದ್ದೀರಾ. ನಾವು ನಿಮ್ಮ ದಾರಿಯಲ್ಲೇ ಸಾಗುವೆವು ಎಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English