ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ಮ್ಯಾನೇಜರ್ ಶ್ರೀಧರ್ ಭಂಡಾರಿ ಮತ್ತು ಸಿಬ್ಬಂದಿ ರಾಹಿಲ್, ಇಬ್ಬರು ಅಧಿಕಾರಿಗಳನ್ನು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.
ಸಬ್ಸಿಡಿ ಹಣ ಬಿಡುಗಡೆ ಮಾಡಬೇಕಾದರೆ 10,000 ರೂಪಾಯಿ ಲಂಚ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು .
ಉದ್ಯಮಿಯೊಬ್ಬರು ಡೈರಿ ವ್ಯವಹಾರ ಮಾಡಲೆಂದು ಸಬ್ಸಿಡಿ ಪಡೆದುಕೊಂಡಿದ್ದರು. ಇವರಿಗೆ ಇಲಾಖೆಯಿಂದ 1 ಲಕ್ಷ ರೂಪಾಯಿ ನಗದು ಹಣ ಬರಬೇಕಾಗಿತ್ತು. ಆದರೆ ನಗದು ಹಣದ ದಾಖಲೆಗಳಿಗೆ ಸಹಿ ಮಾಡಲು 10,000 ಲಂಚ ನೀಡಬೇಕೆಂದು ಕೈಯೊಡ್ಡಿದ್ದರು. ಈ ಬಗ್ಗೆ ಉದ್ಯಮಿ ಎಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಈ ಮಾಹಿತಿ ಮೇರೆಗೆ ಇಂದು ಉದ್ಯಮಿ 10000 ನಗದು ಹಣ ನೀಡಲು ಬರುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ಇಬ್ಬರನ್ನೂ ಬಂಧಿಸಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ
Click this button or press Ctrl+G to toggle between Kannada and English