ಹೆಣ್ಣು ಮಗುವಿಂದ ಕಂಟಕ ಇದೆ ಎಂದು ಕತ್ತು ಹಿಸುಕಿ ಕೊಂದ ತಂದೆ

8:25 PM, Wednesday, June 19th, 2019
Share
1 Star2 Stars3 Stars4 Stars5 Stars
(No Ratings Yet)
Loading...

manjunathaಚಿಕ್ಕಮಗಳೂರು: ತಂದೆಯೊಬ್ಬ ತನ್ನ ಸ್ವಂತ ಮಗುವನ್ನೇ ಕತ್ತು ಹಿಸುಕಿ ಕೊಂದಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ಬೂಚೇನಹಳ್ಳಿ ಕಾವಲ್ ನಲ್ಲಿ ನಡೆದಿದೆ.

ಮಂಜುನಾಥ್( 27) ಕೊಲೆ ಮಾಡಿದ ಪಾಪಿ ತಂದೆ. ಹೆಣ್ಣು ಮಗು ಎಂಬ ಕಾರಣಕ್ಕೆ, ತಾಯಿ ಇಲ್ಲದ ವೇಳೆ ಒಂದೂವರೆ ತಿಂಗಳ ಕಂದನನ್ನ ಕೊಂದಿದ್ದಾನೆ.

ಈ ಹೆಣ್ಣು ಮಗುವಿನಿಂದ  ನಿನ್ನ ಭವಿಷ್ಯಕ್ಕೆ ಕಂಟಕ ಎಂದು ಜ್ಯೋತಿಷಿಯೊಬ್ಬ ಹೇಳಿದ್ದನಂತೆ. ಜ್ಯೊತಿಷಿ ಮಾತು ಕೇಳಿ ಮಂಜುನಾಥ್, ಕಂದನ ಕತ್ತು ಹಿಸುಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಆರೋಪಿ ಮಂಜುನಾಥ್ನನ್ನು ಬಂಧಿಸಿದ್ದಾರೆ. ಸದ್ಯ ಜ್ಯೋತಿಷಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English