ಪತ್ನಿಗೆ ಹಲ್ಲೆ ನಡೆಸಿದ ಗಂಡನನ್ನು ಠಾಣೆಗೆ ಕರೆತರುವಾಗ ನದಿಗೆ ಹಾರಿ ಸತ್ತೇ ಹೋದ

9:31 PM, Monday, July 15th, 2019
Share
1 Star2 Stars3 Stars4 Stars5 Stars
(No Ratings Yet)
Loading...

Muneerಮಂಗಳೂರು : ಪತ್ನಿಗೆ ಹಲ್ಲೆ ನಡೆಸಿದ  ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಡನನ್ನು ಬಂದರ್ ಠಾಣೆಗೆ ಕರೆತರುವಾಗ ಆತ ಕೂಳೂರು ಸೇತುವೆಯಿಂದ ಜಿಗಿದ ಘಟನೆ ರವಿವಾರ ತಡರಾತ್ರಿ ನಡೆದಿದ್ದು, ಆತನ  ಮೃತದೇಹ ಬೆಂಗ್ರೆ ಸಮೀಪ ಸೋಮವಾರ ಸಂಜೆ ಪತ್ತೆಯಾಗಿದೆ.

ಕುದ್ರೋಳಿ ನಿವಾಸಿ ಮುನೀರ್ (42) ಮೃತರು ಎಂದು ಗುರುತಿಸಲಾಗಿದೆ.

ಮುನೀರ್ ತನ್ನ ಪತ್ನಿಗೆ ಹಲ್ಲೆ ನಡೆಸಿದ್ದು, ಬಳಿಕ ತನ್ನ ಲಗೇಜ್ ಸಹಿತ ಮಂಗಳೂರು ತೊರೆಯಲು ಯತ್ನಿಸಿದ್ದರೆನ್ನಲಾಗಿದ್ದು, ಅವರ ವಿರುದ್ಧ ಮುಹಮ್ಮದ್ ಎಂಬವರು ಮಂಗಳೂರು ಉತ್ತರ ಠಾಣೆಯಲ್ಲಿ ದೂರು ನೀಡಿದ್ದರು.

ಪೊಲೀಸರು ದೂರನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಪೊಲೀಸ್ ಠಾಣೆಗಳಿಗೂ ಮಾಹಿತಿ ನೀಡಿದ್ದರು. ಆರೋಪಿ ಆಟೊರಿಕ್ಷಾವೊಂದರಲ್ಲಿ ಹಳೆಯಂಗಡಿ ಸಮೀಪ ಹೋಗುತ್ತಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದರು.

ಬಳಿಕ ಆರೋಪಿ ಮುನೀರ್ ನನ್ನು ಅದೇ ಆಟೊದಲ್ಲಿ ಮಂಗಳೂರಿನ ಬಂದರ್ ಠಾಣೆಗೆ ಕರೆತರುವಾಗ ಕೂಳೂರು ಸೇತುವೆ ಬಳಿ ‘ಮೂತ್ರ ಬರುತ್ತಿದೆ ಕೆಳಗಿಳಿಯಬೇಕು’ ಎಂದು ಹೇಳಿ ಆಟೊದಿಂದ ಕೆಳಗಿಳಿದ ತಕ್ಷಣವೇ ಆರೋಪಿ ಸೇತುವೆಯಿಂದ ಹಾರಿರುವುದಾಗಿ ಪೊಲೀಸರು ತಿಳಿಸಿದ್ದು, ಸೋಮವಾರ ಸಂಜೆ ಬೆಂಗ್ರೆ ಸಮೀಪ ಮುನೀರ್ ಮೃತದೇಹ ಪತ್ತೆಯಾಗಿದೆ.

ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English