ಮಂಗಳಾದೇವಿ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯ ನಾಗರಪಂಚಮಿ

6:59 PM, Monday, August 5th, 2019
Share
1 Star2 Stars3 Stars4 Stars5 Stars
(No Ratings Yet)
Loading...

Mangaladevi ಮಂಗಳೂರು  :  ಶ್ರೀ ಮಂಗಳಾದೇವಿ ಅಮ್ಮನವರ ದೇವಳಕ್ಕೆ ಮುಂಭಾಗದಲ್ಲಿ ನೇರ ಅಭಿಮುಖ ವಾಗಿರುವ, ಅಶ್ವಥ ವೃಕ್ಷರಾಜನ ಅಲಂಕೃತ ನಾಗಬನದ ನಾಗದೇವರ ಸಾನಿಧ್ಯದಲ್ಲಿ ಶ್ರದ್ಧಾ ಭಕ್ತಿಯಿಂದ ಪೂರ್ವ ಶಿಷ್ಠ ಸಂಪ್ರದಾಯದಂತೆ ಶ್ರೀ ದೇವರ ಪೂಜಾ ಕೈಂಕರ್ಯಗಳು ಬಹು ವಿಜೃಂಭಣೆಯಿಂದ ನೆರವೇರಿತು.

ಶ್ರೀ ಕ್ಷೇತ್ರದಲ್ಲಿ ಪ್ರತ್ಯಕ್ಷ ನಾಗದೇವರ ಸಾನಿಧ್ಯ ವಿರುವುದರಿಂದ ಮಂಗಳಕರನಾದ ಶ್ರೀ ನಾಗ ದೇವರು
ತಾಯಿಯ ದೇವಳದ ರಕ್ಷಣೆಯೊಂದಿಗೆ, ಬೇಡಿ ಬರುವ ಸರ್ವರಿಗೂ ಸಂತಾನ ಸಂಪತ್ತುಗಳನ್ನು ಅನುಗ್ರಹಿಸಿ, ಸರ್ವ ಸಮೃದ್ಧಿಯನ್ನು ಕೃಪೆದೋರಿದನು.

ದೇವಳದಲ್ಲಿ ನಾಗರ ಪಂಚಮಿಯಂದು ಕ್ಷೀರವನ್ನಿಟ್ಟು ನಾಗರ ಕಲ್ಲಿಗೆ ಪಂಚಾಮೃತಾಭಿಷೇಕಗೈದು ಆರಾಧಿಸುವ ಸಂಪ್ರದಾಯವಿದ್ದು ಬೆಳಗ್ಗಿನಿಂದಲೇ ಶೃಂಗಾರಾಲಂಕೃತ ನಾಗರಕಟ್ಟೆಯಲ್ಲಿ ನಾಗದೇವರ ಪ್ರೀತ್ಯರ್ಥವಾಗಿ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ನಾಗ ತಂಬಿಲ ಸೇವೆ, ಸೀಯಾಳಾಭಿಷೇಕಾದಿಗಳು ನಡೆದು ,ಅಲಂಕಾರವಾಗಿ ಮಹಾಪೂಜೆಯು ನೆರವೇರಿತು.

ಶ್ರೀ ಕ್ಷೇತ್ರದಲ್ಲಿ ಭಕ್ತಾದಿಗಳು ಇಂದು ಅತ್ಯಧಿಕ ಸಂಖ್ಯೆಯಲ್ಲಿ ಶ್ರೀ ದೇವರ ಸೇವಾರ್ಥ ದೇವಳದ ಹೊರಾಂಗಣದಲ್ಲಿ ಮಾರುದ್ದದ ಸರತಿಸಾಲಿನ ಮೂಲಕ ಬಂದು ನಾಗರಾಜನ ದರ್ಶನ ಭಾಗ್ಯದಿಂದ ಕೃತಾರ್ಥರಾದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English