ಪುತ್ತೂರು ಮೂಲದ ಯುವತಿ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆ

12:34 PM, Saturday, August 10th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Gajaneeshwariಮಂಗಳೂರು  : ನೇತ್ರಾವತಿ ಸೇತುವೆಯಿಂದ ಯುವತಿಯೊಬ್ಬಳು ಶುಕ್ರವಾರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶನಿವಾರ ಬೆಳಗ್ಗೆ ಇಲ್ಲಿಗೆ ಸಮೀಪದ ಸೋಮೇಶ್ವರದಲ್ಲಿ ಶವ ಪತ್ತೆಯಾಗಿದೆ.

ಪುತ್ತೂರು ಮೂಲದ ನಿವೇದಿತಾ ಗಜನೇಶ್ವರಿ (25) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ.

ಶುಕ್ರವಾರ ರಾತ್ರಿ 7 ಗಂಟೆ ಸುಮಾರಿಗೆ ನಿವೇದಿತಾ ಗಜನೇಶ್ವರಿ ಉಳ್ಳಾಲದ ನೇತ್ರಾವತಿ ಸೇತುವೆಯಿಂದ ಹಾರಿದ್ದರು. ರಾತ್ರಿಯೇ ರಕ್ಷಣಾ ಪಡೆಗಳು ಹುಡುಕುವ ಕಾರ್ಯಾಚರಣೆ ನಡೆಸಿದ್ದವು. ಇಂದು ಬೆಳಿಗ್ಗೆ ಸೋಮೇಶ್ವರ‌ ಬಟ್ಟಪ್ಪಾಡಿ ಸಮುದ್ರ ತೀರದಲ್ಲಿ ಶವ ಪತ್ತೆಯಾಗಿತ್ತು.

ಈಕೆ ಸೇತುವೆ ಬಳಿ ತನ್ನ ಬ್ಯಾಗ್, ಮೊಬೈಲ್ ಫೋನ್, ಐಡಿ ಕಾರ್ಡ್ ಇಟ್ಟು ಹಾರಿದ್ದರು. ದಾರಿಹೋಕರು ಈಕೆ ನದಿಗೆ ಹಾರಿದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಂಕನಾಡಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು.

ಈ  ಘಟನೆಗೆ ಸಂಬಂಧಿಸಿ ಶಾಸಕ ವೇದವ್ಯಾಸ್ ಕಾಮತ್ ಅವರು ಸ್ಥಳಕ್ಕೆ ಭೇಟಿ ನೀಡಿ  ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದರು.

vedavyas

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English