ಮಡಿಕೇರಿಯಲ್ಲಿ ಅಡಿಕೆ ಕಳವಿಗೆ ಯತ್ನಿಸಿದ ವ್ಯಕ್ತಿಗೆ ಗುಂಡೇಟು : ಸ್ಥಳದಲ್ಲೇ ಸಾವು

11:52 AM, Friday, August 30th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

ganeshಮಡಿಕೇರಿ : ಅಡಿಕೆ ಕಳವಿಗೆ ಯತ್ನಿಸಿದನೆನ್ನಲಾದ ಆರೋಪದಲ್ಲಿ ವ್ಯಕ್ತಿಯೋರ್ವನಿಗೆ ಮನೆ ಮಾಲಕ ಗುಂಡಿಕ್ಕಿದ್ದರಿಂದ ಆರೋಪಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ಕರಿಕೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಕರಿಕೆ ನಿವಾಸಿ ದೇವಂಗೋಡಿ ಗಣೇಶ್ ಗುಂಡೇಟಿಗೆ ಬಲಿಯಾದ ವ್ಯಕ್ತಿ.

ಈತ ನಿನ್ನೆ ರಾತ್ರಿ ಮಂದೋಡಿ ಮೋನಪ್ಪ ಎಂಬವರ ಮನೆಯಲ್ಲಿ ಅಡಿಕೆ ಕಳವಿಗೆ ಯತ್ನಿಸಿದಾಗ ಗುಂಡು ಹಾರಿಸಿದ್ದಾರೆ.

ಗುಂಡು ತಗುಲಿ ಗಂಭೀರ ಗಾಯಗೊಂಡಿದ್ದ ಗಣೇಶ್ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಎಂದು ಪೋಲಿಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಭಾಗಮಂಡಲ ಪೋಲಿಸರು ತೆರಳಿ ಪ್ರಕರಣ ತನಿಖೆ ನಡೆಸಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English