ಪುತ್ತೂರು : ಕೈಯಲ್ಲಿ ತಲ್ವಾರ್​ ಹಿಡಿದು ರೋಡ​ಲ್ಲಿ ದರ್ಬಾರ್ ನಡೆಸಿದ ಮಾನಸಿಕ ಅಸ್ವಸ್ಥ

1:18 PM, Wednesday, September 25th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

avinashಕಾಣಿಯೂರು : ಇಲ್ಲಿನ ಪುಣ್ಚತ್ತಾರು ಪೇಟೆಯಲ್ಲಿ ಮಾನಸಿಕ ಅಸ್ಪಸ್ಥರೋರ್ವರು ತಲವಾರು ಝಳಪಿಸಿದ ಘಟನೆ ನಡೆದಿದೆ. ದಾರಿಯುದ್ದಕ್ಕೂ ತಲ್ವಾರ್ ಬೀಸಿ ಜನರರಿಗೆ ಭಯಹುಟ್ಟಿಸಿದ ಯುವಕನನ್ನು ಮಾನಸಿಕ ಅಸ್ವಸ್ಥ ಅವಿನಾಶ್ ಎಂದು ಗುರುತಿಸಲಾಗಿದೆ. ಈ ವೀಡಿಯೋ ಇದೀಗ ವೈರಲ್ ಆಗಿದೆ.

ಈ ಕುರಿತು ಸ್ಥಳೀಯರು ಬೆಳ್ಳಾರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು, ತಲ್ವಾರ್ ಬೀಸುತ್ತಿದ್ದರೂ ಆತನನ್ನು ಹಿಡಿಯದೆ ಯುವಕನನ್ನು ಕಾರಿನಲ್ಲೇ ಕುಳಿತು ಹಿಂಬಳಿಸಿದ ಕಾರ್ಯ ವೈಖರಿಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.

ಕೊನೆಗೂ ಪೊಲೀಸರು ತಲವಾರು ಝಳಪಿಸಿದ ಯುವಕನ್ನು ವಶಕ್ಕೆ ಪಡೆದಾಗ ಆತ ಮಾನಸಿಕ ಅಸ್ವಸ್ಥ ಎಂಬುವುದಾಗಿ ತಿಳಿದುಬಂದಿದೆ. ಬಳಿಕ ಆ ವ್ಯಕ್ತಿಯ ಮನೆಯವರಿಗೆ ಮಾಹಿತಿ ನೀಡಿದ್ದು ಮಂಗಳೂರು ಕಂಕನಾಡಿಯ ಆಸತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English