ಕೇಂದ್ರದಿಂದ ಮುಖ್ಯಮಂತ್ರಿ ಯಡಿಯೂರಪ್ಪಗೆ ಅವಮಾನ, ನಮ್ಮೆಲ್ಲರಿಗೆ ಅವಮಾನ ಆದಂತೆ : ಯು.ಟಿ.ಖಾದರ್

3:55 PM, Saturday, September 28th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

UT-Khaderಮಂಗಳೂರು : ಕೇಂದ್ರ ಸರ್ಕಾರ ಕರ್ನಾಟಕವನ್ನ ಕಡೆಗಣಿಸಿ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪದೇ ಪದೇ ಅವಮಾನಿಸುತ್ತಿದೆ. ಮುಖ್ಯಮಂತ್ರಿಗೆ ಅವಮಾನ ನಮ್ಮೆಲ್ಲರಿಗೆ ಅವಮಾನ ಆದಂತೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರವು ಸಂತ್ರಸ್ಥರಿಗೆ ನೆರೆ ಪರಿಹಾರ ನೀಡುವಲ್ಲಿ ವಿಳಂಬ ಧೋರಣೆಯನ್ನು ತೋರುತ್ತಿರುವುದು ಸಲ್ಲದು. ಕೇಂದ್ರ ರಾಜ್ಯಕ್ಕೆ ಸಿಗುವ ಪಾಲನ್ನು ನ್ಯಾಯಯುತವಾಗಿ ನೀಡಬೇಕು ಎಂದು ಎಚ್ಚರಿಸಿದರು. ಜೊತೆಗೆ ಮುಖ್ಯಮಂತ್ರಿಯವರನ್ನ ಕೇಂದ್ರ ಗೌರವದಿಂದ ಕಾಣಬೇಕು ಎಂದರು.

ಈಗಾಗಲೇ ದೆಹಲಿಗೆ ಹೋಗಿ ಬರಿಗೈಯಲ್ಲಿ ವಾಪಸ್ಸು ಬಂದಿರುವ ಮುಖ್ಯಮಂತ್ರಿ, ಈ ಬಾರಿಯು ಅವರೊಬ್ಬರೆ ಹೋದರೆ ಖಂಡಿತ ಅವಮಾನದಿಂದ ಮರಳಿ ಬರಬಹುದು ಹಾಗಾಗಿ ನಿಮ್ಮ ಜೊತೆ ನಾವಿದ್ದೇವೆ, ನಾವು ನಿಮ್ಮ ಜೊತೆ ದೆಹಲಿಗೆ ಬರುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರಿಗೆ ಖಾದರ್‍ ಧೈರ್ಯ ಹೇಳಿದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English