ಮೈಸೂರು ದಸರಾ ಯಶಸ್ವಿಯಾಗಲು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದ : ಸಚಿವ ವಿ.ಸೋಮಣ್ಣ

3:27 PM, Wednesday, October 9th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

somannaಮೈಸೂರು : ದಸರಾ ಮಹೋತ್ಸವದ ಪ್ರತಿಯೊಂದು ಖರ್ಚುಗಳನ್ನು ಈ ತಿಂಗಳೊಳಗೆ ನೀಡುತ್ತೇನೆ ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ವಿಶ್ವವಿಖ್ಯಾತ ಮೈಸೂರು ದಸರಾಗೆ ಅದ್ಧೂರಿ ತೆರೆಬಿದ್ದ ಹಿನ್ನೆಲೆಯಲ್ಲಿ ಇಂದು ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿ. ಸೋಮಣ್ಣ ನಾಡ ಹಬ್ಬ ಯಶಸ್ವಿಯಾಗಲು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.

ದಸರಾದಲ್ಲಿ ಗ್ರಾಮೀಣ ದಸರಾ, ಮನೆ ಮನೆ ದಸರಾ, ಕ್ರೀಡಾ ದಸರಾ ಉತ್ತಮವಾಗಿ ಮೂಡಿ ಬಂದಿವೆ. ದಸರಾ ಎಂಬುದು ಎಲ್ಲೂ ಬಿಜೆಪಿ ಸಂಭ್ರಮವಾಗಿಲ್ಲ. ಇಲ್ಲಿ ಎಲ್ಲ ಪಕ್ಷದ ಕಾರ್ಯಕರ್ತರಿಗೂ ಅವಕಾಶ ಕೊಟ್ಟಿದ್ದೇವೆ. ಪ್ರತಿಯೊಂದು ಕಾರ್ಯಕ್ರಮದ ಖರ್ಚಿನ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ ಎಂದು ಹೇಳಿದರು.

ಯುವ ದಸರಾದಲ್ಲಿ ಭಾಗವಹಿಸಿದ್ದ ತಾರೆಯರಿಗೆ ನೀಡಿರುವ ಹಣದ ಮೊತ್ತವನ್ನು ಸಹ ತಿಳಿಸುತ್ತೇನೆ. ಹಣಕಾಸು ನೀಡುವ ವಿಚಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಂಡು ಬಂದಿದ್ದು, ಪ್ರತಿಯೊಂದರ ಮಾಹಿತಿ ನೀಡುತ್ತೇನೆ ಹಾಗೂ ದಸರಾದಲ್ಲಿ ಉಳಿದ ಹಣವನ್ನ ನೆರೆ ಸಂತ್ರಸ್ತರಿಗೆ ನೀಡುತ್ತೇವೆ ಎಂದು ಇದೇ ವೇಳೆ ಘೋಷಣೆ ಮಾಡಿದರು.

ದಸರಾ ಸಿದ್ಧತೆ ವೇಳೆ ಸಿದ್ದರಾಮಯ್ಯ ಎರಡು ಬಾರಿ ಫೋನ್‌ ಮಾಡಿ ದಸರಾ ಚೆನ್ನಾಗಿ ಮಾಡುತ್ತಿದ್ದಿಯಾ ಎಂದರು. ಆದ್ರೆ, ನಿನ್ನ ಜೊತೆ ಇರುವ ಪ್ರತಾಪ್ ಸಿಂಹ ಸರಿ ಇಲ್ಲ ಹುಷಾರ್. ಅವನನ್ನು ನಂಬ ಬೇಡ‌ ಅಂತಿದ್ರು ಎಂದು ಹೇಳಿ ನಸು ನಕ್ಕರು.

ದಸರಾ ಚಟುವಟಿಕೆ ಮುಗಿದಿದ್ದು, ಇಂದಿನಿಂದ ನಾನು ನೆರೆ ಸಂತ್ರಸ್ತರ ಕಷ್ಟಗಳನ್ನ ಆಲಿಸುತ್ತೇನೆ. ಇದರ ಬಗ್ಗೆ ಸಂಪೂರ್ಣವಾಗಿ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ಬೆಳಗಾವಿ, ಬಾಗಲಕೋಟೆ ನೆರೆ ಸಂತ್ರಸ್ತರ ಸಮಸ್ಯೆ ಕೇಳುತ್ತೇನೆ ಎಂದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English