ಶರತ್ ಬಚ್ಚೇಗೌಡಗೆ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟ ಸಚಿವ ಆರ್ ಅಶೋಕ್

3:34 PM, Monday, November 4th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

R-Ashok

ಬೆಂಗಳೂರು : ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಸ್ಪರ್ಧೆ ವಿಚಾರ, ಪರೋಕ್ಷವಾಗಿ ಸಚಿವ ಆರ್ ಅಶೋಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಪಕ್ಷ ಯಾರಿಗೆ ಟಿಕೆಟ್ ಕೊಡುತ್ತೆ ಅವರು ಸ್ಪರ್ಧೆ ಮಾಡಬೇಕು, ಬೇರೆಯವರು ನಿಂತರೆ ಅವರು ವಿರುದ್ಧ ಪಕ್ಷ ಶಿಸ್ತಿನ ಕ್ರಮ ಕೈಗೊಳ್ಳಲಿದೆ. ಬಚ್ಚೇಗೌಡ, ಶರತ್ ಬಚ್ಚೇಗೌಡ ಪಕ್ಷದ ಪರವಾಗಿ ಕೆಲಸ ಮಾಡುತ್ತಾರೆ, ಬೇರೆ ರೀತಿ ಏನೂ ಇಲ್ಲ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರೇ ನಮ್ಮ ತಂಟೆಗೆ ಬರೋದಿಕ್ಕೆ ಹೋಗಬೇಡಿ, ಕಾಂಗ್ರೆಸ್ ನವರು ಕೋರ್ಟ್‌ಗೆ ದಾಖಲೆ ಕೊಡಲಿ, ನಮ್ಮ ಬಳಿಯೂ ದಾಖಲೆಗಳಿವೆ, ಸರ್ಕಾರ ಬೀಳಿಸುವ ಹೇಳಿಕೆ ಕೊಟ್ಟೋರು ಸಿದ್ದರಾಮಯ್ಯ ತಾನೆ ಎಂದು ಎಂದು ಹೇಳಿದ್ದಾರೆ.

ವೀರಪ್ಪ ಮೊಯಿಲಿ ದೊಡ್ಡ ಸುಳ್ಳುಗಾರ, ಸಿದ್ದರಾಮಯ್ಯ ನೀವೂ ಸುಳ್ಳು ಆಡಬೇಡಿ, ಸುಳ್ಳುಗಾರ ಅಂದರೆ ಸಿದ್ದರಾಯಮ್ಮ, ಸಿದ್ದರಾಮಯ್ಯ ಅಂದರೆ ಸುಳ್ಳುಗಾರ , ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮೂಲೆಗುಂಪಾಗಿದ್ದಾರೆ. ಈ ಹಿಂದೆ ಸೋನಿಯಾ ಗಾಂಧಿಯವರಿಗೂ ಸಿದ್ದರಾಮಯ್ಯಗೆ ಬೈದಿದ್ದರು ಎಂದರು.

ಶಾಸಕರ ರಾಜೀನಾಮೆಗೆ ಸಿದ್ದರಾಮಯ್ಯನವರೇ ಕಾರಣ, 17 ಜನ ಶಾಸಕರು ರಾಜೀನಾಮೆ ಕೊಡುವುದಕ್ಕೆ ನೀವೇ ಕಾರಣ, ಈಗಾಗಲೇ ಶಾಂತಿವನದಲ್ಲಿ ಕುಳಿತು ಈ ಬಗ್ಗೆ ಮಾತನಾಡಿದ್ದೀರ, ನಾವು ನಿಮ್ಮ ಮಾತನ್ನು ಸಂಯಮದಿಂದ ಕೇಳಿದ್ದೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English