ಶಿವಮೊಗ್ಗ : ಕೌಟುಂಬಿಕ ಕಲಹದಿಂದ ಬೇಸತ್ತ ತಾಯಿ, ತನ್ನ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಮೆಗೆ ಯತ್ನಿಸಿರುವ ಘಟನೆ ತಾಲೂಕಿನ ಬೀರನಕೆರೆ ಗ್ರಾಮದಲ್ಲಿ ನಡೆದಿದೆ.
ಬೀರನಕೆರೆ ಗ್ರಾಮದ ಚೈತ್ರ (24) ತನ್ನ 3 ವರ್ಷದ ಮಗು ಕೌಶಿಕ್ನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ. ಚೈತ್ರ ಬಾವಿಗೆ ಹಾರಿದನ್ನು ಕಂಡ ಗ್ರಾಮಸ್ಥರು ಬಾವಿಗೆ ಹಾರಿ ಚೈತ್ರರನ್ನು ರಕ್ಷಣೆ ಮಾಡಿ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಬಾವಿಯಲ್ಲಿ ಮಗು ಇರುವುದನ್ನು ಗಮನಿಸದ ಗ್ರಾಮಸ್ಥರು ತಾಯಿಯನ್ನು ಮಾತ್ರ ರಕ್ಷಣೆ ಮಾಡಿದ್ದಾರೆ. ಇದರಿಂದ ಮಗು ಬಾವಿಯಲ್ಲೆಯೇ ಸಾವನ್ನಪ್ಪಿದೆ.
ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಯಿ ಬದುಕುಳಿದಿದ್ದು, ಮಗು ಸಾವನ್ನಪ್ಪಿದ್ದು ನಿಜಕ್ಕೂ ದುರ್ದೈವ.
Click this button or press Ctrl+G to toggle between Kannada and English