ಮಹಾರಾಷ್ಟ್ರದ ಸಾಂಗ್ಯೋಲಾ ಬಳಿಕ ರಸ್ತೆ ಅಪಘಾತ : ಐವರು ವಿಠಲನ ಭಕ್ತರು ಮೃತ್ಯು

12:45 PM, Friday, November 8th, 2019
Share
1 Star2 Stars3 Stars4 Stars5 Stars
(No Ratings Yet)
Loading...

apghata

ಬೆಳಗಾವಿ : ಏಕಾದಶಿಯ ಅಂಗವಾಗಿ ಪಂಢರಪುರದ ವಿಠಲನ ದರ್ಶನಕ್ಕಾಗಿ ಹೋಗುತ್ತಿದ್ದ ಬೆಳಗಾವಿಯ ಐವರು ಭಕ್ತರು ಮಹಾರಾಷ್ಟ್ರ ದ ಸಾಂಗೋಲ್ಯಾ ಬಳಿ ಶುಕ್ರವಾರ ಬೆಳಗ್ಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಮೃತರನ್ನು ಬೆಳಗಾವಿ ತಾಲೂಕಿನ ಮಂಡೋಳಿ ಗ್ರಾಮದ ಕೆ.ವಿ. ಕಣಬರಕರ, ಮಹಾದೇವ ಎಂ.ಕಣಬರಕರ , ಬಾಳು ಅಂಬೇವಾಡಿಕರ, ಅರುಣ ಮುತಗೇಕರ ಹಾಗೂ ಹಂಗರಗಾ ಗ್ರಾಮದ ಎ.ಪಾಟೀಲ ಎಂದು ಗುರುತಿಸಲಾಗಿದೆ. ಎಂ.ಸಾಳವಿ, ಗಣಪತ ದಳವಿ, ಪರಶುರಾಮ ದಳವಿ ಗಾಯಗೊಂಡಿದ್ದಾರೆ.

ಮಂಡೋಳಿ ಗ್ರಾಮದಿಂದ ಗುರುವಾರ ರಾತ್ರಿ ಟೆಂಪೋದಲ್ಲಿ ಪಂಢರಪುರಕ್ಕೆ ತೆರಳಿದ್ದರು. ಮಹಾರಾಷ್ಟ್ರದ ಸಾಂಗೋಲ್ಯಾ ಸಮೀಪ ಶುಕ್ರವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಎದುರಿನಿಂದ ಹೋಗುತ್ತಿದ್ದ ಟ್ರಾಕ್ಟರ್ಗೆ ಭಕ್ತರಿದ್ದ ಟೆಂಪೋ ಹಿಂದಿನಿಂದ ಜೋರಾಗಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ವಾಹನದಲ್ಲಿದ್ದವರ ಪೈಕಿ ಐವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಇನ್ನೂಳಿದ 7 ಜನರು ಗಾಯಗೊಂಡ ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English