ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ, ಸರ್ವಧರ್ಮ ಸಮ್ಮೇಳನ ಉದ್ಘಾಟನೆ

11:11 AM, Tuesday, November 26th, 2019
Share
1 Star2 Stars3 Stars4 Stars5 Stars
(4 rating, 1 votes)
Loading...

laksha-deepotsava ಧರ್ಮಸ್ಥಳ :ಒಳ್ಳೆಯವರಾಗಿ ಮತ್ತು ಒಳ್ಳೆಯ ಕೆಲಸವನ್ನೇ ಮಾಡಿ – ಇದೇಜೀವನ ಸಿದ್ಧಾಂತವಾಗಬೇಕು ಎಂದು ನಿಕಟಪೂರ್ವ ಲೋಕಸಭಾಅಧ್ಯಕ್ಷರಾದ ಸುಮಿತ್ರಾ ಮಹಾಜನ್ ಹೇಳಿದರು.

ಅವರು ಸೋಮವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಸರ್ವಧರ್ಮ ಸಮ್ಮೇಳನದ ೮೭ನೇ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು.

laksha-deepotsava ನಾವು ಒಳ್ಳೆಯ ವರ್ತನೆಯನ್ನು ಹೊಂದಿದಾಗ ಮಾತ್ರಇತರರೂ ಒಳ್ಳೆಯ ವ್ಯಕ್ತಿಗಳಾಗಿ ರೂಪಿಗೊಳ್ಳಲು ನಾವು ಆದರ್ಶ ವ್ಯಕ್ತಿಗಳಾಗಿ ನಮ್ಮ ವರ್ತನೆಯಿಂದ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ.ಧರ್ಮ ಮತ್ತುಕರ್ತವ್ಯದಲ್ಲಿ ನಿವೃತ್ತಿಎಂಬುದುಇಲ್ಲ. ಸತ್ಯ, ಪ್ರಾಮಾಣಿಕತೆ ಮತ್ತು ಸದಾಚಾರದಿಂದ ಮಾನವನೇ ಮಾಧವನಾಗಬಲ್ಲ ಎಂದುಅವರು ಹೇಳಿದರು.

ಭಾರತೀಯರ ನಂಬಿಕೆ, ನಡವಳಿಕೆ, ಜೀವನ ಸಿದ್ಧಾಂತ, ನೈತಿಕತೆ ಹಾಗೂ ಜೀವನ ಮೌಲ್ಯಗಳು ವಿಶಿಷ್ಟವಾಗಿವೆ. ದೇಶದ ಹಿತ ಮತ್ತು ಪ್ರಗತಿಗಾಗಿಎಲ್ಲರೂಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು.ಧರ್ಮ ಮತ್ತು ನೈತಿಕ ಹಿನ್ನೆಲೆಯಲ್ಲಿ ಭೌತಿಕ ಸಂಪತ್ತಿನ ಸಂಗ್ರಹ ಮಾಡಬೇಕು. ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಭಾವನೆಯಿಂದ ಸರಳ ಜೀವನ ನಡೆಸಬೇಕು. ಎಲ್ಲಾ ಕ್ಷೇತ್ರಗಳಲ್ಲಿ ನಿಷ್ಠೆ ಮತ್ತು ನೈತಿಕತೆ ಇದ್ದಾಗ ಸ್ವ-ಪರ ಹಿತ ಸಾಧನೆಯೊಂದಿಗೆ ದೇಶದ ಪ್ರಗತಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

laksha-deepotsava ಅಧ್ಯಕ್ಷತೆ ವಹಿಸಿದ ಇಸ್ಕಾನ್‌ನ ಹಿರಿಯ ವಿದ್ವಾಂಸಗೌರ್‌ಗೋಪಾಲದಾಸ್ ಮಾತನಾಡಿ,ಭಾರತದಆಧ್ಯಾತ್ಮ ಮತ್ತುಧಾರ್ಮಿಕ ಸಿದ್ಧಾಂತ ನಮಗೆ ಬದುಕುವಕಲೆಯನ್ನು ಕಲಿಸುತ್ತದೆ.ಭಾರತದಧರ್ಮ, ಸಂಸ್ಕೃತಿ, ಆಚಾರ-ವಿಚಾರದ ಅನುಷ್ಠಾನದಿಂದಜೀವನ ಪಾವನವಾಗುತ್ತದೆ.ಸುಖ, ಶಾಂತಿ, ನೆಮ್ಮದಿ ಮತ್ತು ಸಂತೋಷ ಸಿಗುತ್ತದೆ. ವಿದೇಶಿಯರುಕೂಡಾ ಭಾರತೀಯಧರ್ಮ, ಜೀವನ ಶೈಲಿ, ಕಲೆ, ಸಂಸ್ಕೃತಿ ಮತ್ತುಆಧ್ಯಾತ್ಮದಿಂದಆಕರ್ಷಿತರಾಗಿ ಶಾಂತಿ-ನೆಮ್ಮದಿ ಪಡೆಯಲು ಭಾರತಕ್ಕೆ ಬರುತ್ತಾರೆಎಂದುಅವರು ಹೇಳಿದರು.

ವಿಮಾನಯಾನದಂತೆ ಹುಟ್ಟು ಮತ್ತು ಸಾವು ನಮ್ಮಅಧೀನದಲ್ಲಿಇಲ್ಲ. ಆದುದರಿಂದ ಬದುಕಿನಲ್ಲಿ ನಮಗೆ ಸಿಕ್ಕಿದ ಅವಕಾಶದ ಸದುಪಯೋಗ ಪಡೆದು, ಪ್ರೀತಿ-ವಿಶ್ವಾಸದಿಂದತ್ಯಾಗ ಮತ್ತು ಸೇವಾ ಮನೋಭಾವದಿಂದಉತ್ತಮ ಸಂವಹನ ಕಲೆಯೊಂದಿಗೆಎಲ್ಲರೊಂದಿಗೂ ಮುಕ್ತವಾಗಿ ಬೆರೆತು ಸೌಹಾರ್ದಯುತಜೀವನ ನಡೆಸಬೇಕು. ಐಸ್‌ಕ್ರೀಂ ನಂತೆಬದುಕಿನಲ್ಲಿಕರಗಿ ಹೋಗದೆ ಮೇಣದಬತ್ತಿಯಂತೆತಾನೂಕರಗಿಇತರರ ಬದುಕಿಗೂ ಬೆಳಕನ್ನು ನೀಡುವ ದೀಪಗಳಾಗಬೇಕು.ದ್ವೀಪಗಳಾಗಬಾರದು ಎಂದುಅವರು ಸಲಹೆ ನೀಡಿದರು.
laksha-deepotsava
ಬದುಕುಎಂಬುದೇ ಸಂಘರ್ಷವಾಗಿದೆ.ಜೀವನದಲ್ಲಿಎದುರಾಗುವ ಸಮಸ್ಯೆಗಳನ್ನು ಮತ್ತು ಸವಾಲುಗಳನ್ನು ಧೈರ್ಯ ಮತ್ತುಆತ್ಮವಿಶ್ವಾಸದಿಂದಎದುರಿಸಬೇಕುಎಂದುಅವರು ಸಲಹೆ ನೀಡಿದರು.ಆತ್ಮಹತ್ಯೆಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಆದುದರಿಂದದೈಹಿಕಆರೋಗ್ಯಕ್ಕೆ ಗಮನ ಕೊಟ್ಟಂತೆ ಮಾನಸಿಕ ಆರೋಗ್ಯಕ್ಕೂ ಗಮನ ಕೊಡಬೇಕುಎಂದುಅವರು ಕಿವಿ ಮಾತು ಹೇಳಿದರು.

ಜೀವನ ಮತ್ತುಧರ್ಮದ ಬಗ್ಯೆ ಮೈಸೂರಿನ ಫೋಕಸ್‌ಅಕಾಡೆಮಿಯ ಮುಖ್ಯಕಾರ್ಯನಿರ್ವಾಹಕ ಡಿ.ಟಿ. ರಾಮಾನುಜಮ್ ಮಾತನಾಡಿ,ಜೀವನದಲ್ಲಿ ನೈತಿಕತೆ ಮುಖ್ಯವಾಗಿದೆ.ಧರ್ಮದ ಪಾಲನೆಯೊಂದಿಗೆ ಬದುಕಿನ ನೈಜತೆಯನ್ನು ತಿಳಿದುಕೊಳ್ಳಬೇಕು.ಮಾನವೀಯ ಮೌಲ್ಯಗಳೊಂದಿಗೆ ಆಶಾವಾದಿಗಳಾಗಿ ಉತ್ಸಾಹದಿಂದ ಸಾರ್ಥಕಜೀವನ ನಡೆಸಬೇಕುಎಂದುಅವರು ಸಲಹೆ ನೀಡಿದರು.

ರಾಜಕೀಯ ಮತ್ತು ಭಾರತೀಯ ದ ಬಗ್ಯೆಮಂಗಳೂರಿನ ಕದ್ರಿ ನವನೀತ ಶೆಟ್ಟಿ ಮಾತನಾಡಿ,ರಾಜಕೀಯದಲ್ಲಿ ಪ್ರಾಮಾಣಿಕತೆ ಮತ್ತು ನೈತಿಕತೆಕಾಪಾಡಬೇಕುಎಂದು ಸಲಹೆ ನೀಡಿದರು.

laksha-deepotsava ಮಹಾತ್ಮಾಗಾಂಧೀಜಿ ಬಗ್ಯೆ ಮಾತನಾಡಿದ ಬೊಳುವಾರ್ ಮಹಮ್ಮದ್‌ಕುಂಞ, ಸತ್ಯ ಮತ್ತುಅಹಿಂಸೆಯ ಪಾಲನೆಯೊಂದಿಗೆ ನಮ್ಮದೇಶಕ್ಕೆ ಸ್ವಾತಂತ್ರ್ಯತಂದುಕೊಟ್ಟಗಾಂಧೀಜಿಯವರಜೀವನ ಸಿದ್ಧಾಂತ ಸಾರ್ವಕಾಲಿಕ ಮೌಲ್ಯ ಹೊಂದಿದೆ.ಅವರ ಆದರ್ಶಗಳನ್ನು ನಮ್ಮದೈನಂದಿನ ಜೀವನದಲ್ಲಿ ಅನುಷ್ಠಾನಗೊಳಿಸಬೇಕು.ಸರಳ ಜೀವನ ಮತ್ತುಉನ್ನತಚಿಂತನೆ ನಮ್ಮ ಬದುಕಿನಧ್ಯೇಯವಾಗಿರಬೇಕುಎಂದುಅವರು ಸಲಹೆ ನೀಡಿದರು.

ಸರ್ವಧರ್ಮಗಳ ಮೂಲ ಉದ್ದೇಶ ಲೋಕ ಕಲ್ಯಾಣ: ಡಿ. ವೀರೇಂದ್ರ ಹೆಗ್ಗಡೆ
ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತ ಭಾಷಣ ಮಾಡಿದಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಲೋಕ ಕಲ್ಯಾಣವೇ ಸರ್ವಧರ್ಮಗಳ ಮೂಲ ಉದ್ದೇಶವಾಗಿದೆ.ಸಮಕಾಲೀನ ಸಮಾಜದ ಆಗು ಹೋಗುಗಳಿಗೆ ಲಯಬದ್ಧವಾಗಿ ಸ್ಪಂದಿಸಿ ಧಾರ್ಮಿಕ ವಿಚಾರಗಳ ವಿಮರ್ಶೆಗಳೊಂದಿಗೆ ವಿವೇಕ, ಕ್ಷಮೆ, ಸಹಾನುಭೂತಿ, ಶ್ರದ್ಧೆ, ಪ್ರೀತಿ-ವಿಶ್ವಾಸ ಹಾಗೂ ಸತ್ಯವನ್ನೊಳಗೊಂಡ ನಡತೆಯ ನಾಗರಿಕತೆಯೇಧರ್ಮದ ಮೂಲ ಜೀವದ್ರವ್ಯವಾಗಿದೆಎಂದುಅವರುಹೇಳಿದರು.

laksha-deepotsava ಜಗತ್ತಿನ ಪ್ರಾಚೀನ ಧರ್ಮಗಳಾದ ಜೈನಧರ್ಮ ಹಿಂದೂಧರ್ಮ, ಕ್ರೈಸ್ತ, ಇಸ್ಲಾಂ ಹಾಗೂ ಬೌದ್ಧ ಧರ್ಮಗಳು ಸಾಮರಸ್ಯ ಮತ್ತು ಸಮನ್ವಯಧೋರಣೆಯ ಮೂಲಕ ಇಡೀ ಪ್ರಪಂಚಕ್ಕೆಅಮೂಲ್ಯಸಂದೇಶವನ್ನು ನೀಡಿವೆ. ಪ್ರತಿಯೊಂದುಕ್ರಿಯೆ, ವ್ಯವಹಾರ, ಆಚರಣೆಯೂ ಸತ್ಯ, ನಿಷ್ಠೆಗಳಿಂದ ಇದ್ದರೆಅದುಧರ್ಮ. ಈ ದಾರಿತಪ್ಪಿದರೆಅದುಅಧರ್ಮವಾಗುತ್ತದೆ.ಧರ್ಮ ಮತ್ತು ಸೇವೆಗಳು ಜೊತೆಯಾಗಿ ಸಾಗಬೇಕು.ಬದುಕು ಮತ್ತುಇತರರನ್ನು ಬದುಕಲು ಬಿಡಬೇಕುಎಂಬುದುಜೈನಧರ್ಮದ ಸಾರವಾಗಿದೆ.

ಜಗತ್ತನ್ನು ಮರೆತುಆತ್ಮೋದ್ಧಾರವನ್ನು ಮಾಡಲಾರೆವು. ನಮ್ಮನ್ನು ಮರೆತುಜಗದಉದ್ಧಾರ ಮಾಡಲಾರೆವು.ನಾವೇ ಸ್ವತಃ ಏಳಬೇಕು, ಇತರರನ್ನುಜಾಗೃತರನ್ನಾಗಿ ಮಾಡಬೇಕು. ಅದುವೇ ಧರ್ಮದ ತಿರುಳು.

ರಾಜಕೀಯದಲ್ಲಿಧರ್ಮಇರಲೇ ಬೇಕು ಆಗ ಮಾತ್ರಎಲ್ಲರ ಪ್ರೀತಿ-ವಿಶ್ವಾಸಗಳಿಸಬಹುದುಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟರು.

laksha-deepotsava ಎ.ಪಿ.ಎಂ.ಸಿ. ಅಧ್ಯಕ್ಷ ಕೇಶವ ಗೌಡ ಬೆಳಾಲು ಧನ್ಯವಾದವಿತ್ತರು. ಉಜಿರೆಯಎಸ್.ಡಿ.ಎಂ. ಕಾಲೇಜಿನ ಉಪನ್ಯಾಸP ಡಾ.ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು.

ಬಳಿಕ ಕಂಚಿಮಾರು ಕಟ್ಟೆ ಉತ್ಸವ ನಡೆಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English