ಕುಂದಾಪುರ: ಸಮುದ್ರಕ್ಕಿಳಿದ ಮೂವರು ನೀರುಪಾಲು

12:54 PM, Saturday, October 27th, 2012
Share
1 Star2 Stars3 Stars4 Stars5 Stars
(No Ratings Yet)
Loading...

Kodi beachಕುಂದಾಪುರ: ಕುಂದಾಪುರದ ಕೋಡಿ ಸಮುದ್ರ ಕಿನಾರೆಯಲ್ಲಿ ಶುಕ್ರವಾರ ಸಂಜೆ ನೀರಿಗಿಳಿದ ಮೂವರು ಸಮುದ್ರಪಾಲಾಗಿದ್ದಾರೆ. ಬಕ್ರೀದ್ ಹಬ್ಬಕ್ಕೆಂದು ಕೋಡಿಯ ಮೂಲಮನೆಗೆ ಬಂದಿದ್ದ ಮಂಗಳೂರಿನಲ್ಲಿ ವಿಶ್ವಾಸ್ ಬಾವಾ ಬಿಲ್ಡರ್ಸ್ ಪಾಲುದಾರರಾಗಿ ಕೆಲಸ ನಿರ್ವಹಿಸುತ್ತಿದ್ದ ಸಯ್ಯದ್ ಮಹಮ್ಮದ್, ಮತ್ತು ಅವರ ಸಹೋದರ ಬೆಂಗಳೂರಿನಲ್ಲಿ ರಿಯಲ್ಎಸ್ಟೀಟ್ ಉದ್ಯಮಿಯಾಗಿರುವ ಅಬ್ದುಲ್ ಖಾದರ್ ಹಾಗೂ ಇವರ ಹತ್ತಿರದ ಸಂಬಂಧಿ ಬಾಲಕ ರಿಯಾನ್ ಮೃತಪಟ್ಟವರಾಗಿದ್ದಾರೆ.

ಬಕ್ರೀದ್ ಹಬ್ಬದ ಸಂಭ್ರಮದಲ್ಲಿದ್ದ ಇವರು ಸಂಜೆಯ ವೇಳೆ ಸಮುದ್ರ ಕಿನಾರೆಗೆ ತೆರಳಿದ್ದರು, ನೀರಿನಲ್ಲಿ ಆಟವಾಡುತ್ತಿದ್ದ ಬಾಲಕ ರಿಯಾನ್ ಸಮುದ್ರಪಾಲಾಗುತ್ತಿರುವುದನ್ನು ಗಮನಿಸಿದ ಇವರು ಆತನನ್ನು ರಕ್ಷಿಸಲೆಂದು ಕಡಲಿಗೆ ದುಮುಕಿದರು ಆದರೆ ಮೂವರು ಅಲೆಯ ಹೊಡೆತಕ್ಕೆ ಸಿಲುಕಿ ಕೊಚ್ಚಿಹೋದರು. ಈ ಸಂದರ್ಭ ಸ್ಥಳೀಯ ಉದ್ಯಮಿ ಆರೀಫ್ ಎಂಬುವವರು ಜನರ ಬೊಬ್ಬೆ ಕೇಳಿ ತೀರಕ್ಕೆ ಧಾವಿಸಿ ಜೀವದ ಹಂಗು ತೊರೆದು ಕಡಲಿಗೆ ದುಮುಕಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನೀರಿನ ಅಲೆಗಳ ಹೊಡೆತಕ್ಕೆ ಸಿಕ್ಕ ಇವರನ್ನು ಮೀನುಗಾರರು ರಕ್ಷಿಸಿ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಆರೀಫ್ ಅಪಾಯದಿಂದ ಪಾರಾಗಿದ್ದಾರೆ.

ಸಯ್ಯದ್ ಮಹಮ್ಮದ್ ಹಾಗೂ ಅಬ್ದುಲ್ ಖಾದರ್ ರವರ ಮೃತದೇಹ ಪತ್ತೆಯಾಗಿದ್ದು, ಬಾಲಕ ರಿಯಾನ್ ಮೃತದೇಹ ಪತ್ತೆಯಾಗಿಲ್ಲ. ಶೋಧಕಾರ್ಯ ಮುಂದುವರಿದಿದೆ. ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English