ನಾನು ಮೊದಲೇ ಈ ಫಲಿತಾಂಶ ಹೇಳಿದ್ದೆ, ಅವರು ಗಮನ ಕೊಡಲಿಲ್ಲ : ಜರ್ನಾದನ ಪೂಜಾರಿ

3:09 PM, Monday, December 9th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

poojary ಮಂಗಳೂರು : ಜನರ ಅಭಿಪ್ರಾಯಗಳಿಗೆ ಬೆಲೆ ನೀಡಬೇಕು, ಕಾಂಗ್ರೆಸ್ ನ ಕೆಲವು ನಾಯಕರು ದುರಹಂಕಾರ ಬಿಡಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಜರ್ನಾದನ ಪೂಜಾರಿ ಹೇಳಿದ್ದಾರೆ.

ರಾಜ್ಯದ ಉಪ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ  ಅವರು, ನಾನು ಮೊದಲೇ ಹೇಳಿದ್ದೆ ಕಾಂಗ್ರೆಸ್ ನ ಕೆಲವರ ದುರಹಂಕಾರದಿಂದ ರಾಜ್ಯದ ಉಪ ಚುನಾವಣೆಯಲ್ಲಿ ಸೋಲಾಗುತ್ತದೆ ಎಂದು. ನನ್ನ ಭವಿಷ್ಯ ನಿಜವಾಗಿದೆ ಎಂದು ಅವರು ಹೇಳಿದರು. ಮತ್ತೆ ಗೆಲುವು ಸಾಧಿಸಬೇಕಾದರೆ ದುರಹಂಕಾರವನ್ನು ಕೆಲವು ನಾಯಕರು ಬಿಡಬೇಕು ಎಂದು ಸಲಹೆ ನೀಡಿದರು .

ಪಕ್ಷವನ್ನು ಸರಿಪಡಿಸಿ ತಪ್ಪುಗಳನ್ನು ತಿದ್ದಿಕೊಂಡು ಸರಿಮಾಡಿ ಹೋಗಿ ಎಂದು ಹೇಳಿದ್ದೇನೆ. ಅವರು ಗಮನ ಕೊಡಲಿಲ್ಲ. ಈಗ ಅನುಭವಿಸಬೇಕಾಗಿದೆ. ಇದೇ ರೀತಿ ಸಾಗಿದರೆ ಮತ್ತೆ ಬಿಜೆಪಿಯೇ ಜಯ ಸಾಧಿಸುತ್ತದೆ. ಜನರ ಮಾತಿಗೆ ಬೆಲೆ ನೀಡಿ ಪಕ್ಷ ಸಂಘಟಿಸಬೇಕಾಗಿದೆ ಎಂದು ಜನಾರ್ದನ ಪೂಜಾರಿ ತಿಳಿಸಿದ್ದಾರೆ.

Video

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English