ಸಿದ್ದರಾಮಯ್ಯನವರಿಗೆ ಮರ್ಯಾದೆ ಇದ್ದರೆ ಕ್ಷಮೆ ಕೇಳಬೇಕು : ಸೊಗಡು ಶಿವಣ್ಣ

3:48 PM, Tuesday, December 10th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

shivanna

ತುಮಕೂರು : ಸಿದ್ದರಾಮಯ್ಯನವರಿಗೆ ನಾಡಿನ ಜನ ಗೃಹ ಬಂಧನದ ಶಿಕ್ಷೆ ಕೊಟ್ಟಿದ್ದಾರೆ. ಹಾಗಾಗಿ ಮರ್ಯಾದೆ ಇದ್ದರೆ ಇವರು ನಾಡಿನ ಜನರ ಕ್ಷಮೆ ಕೇಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯರ ವಿರುದ್ದ ಮಾಜಿ ಸಚಿವ ಸೊಗಡು ಶಿವಣ್ಣ ಗುಡುಗಿದ್ದಾರೆ.

ಸಿದ್ದರಾಮಯ್ಯನವರು ಮಾತೆತ್ತಿದ್ರೆ ಯಡಿಯೂರಪ್ಪನವರಿಗೆ ಟೀಕೆ ಮಾಡುತ್ತಿದ್ದರು. ಜೈಲಿಗೆ ಹೋಗಿದ್ರು ಜೈಲಿಗೆ ಹೋಗಿದ್ರು ಎಂದು ಹೊದಲೆಲ್ಲಾ ಹೇಳುತ್ತಿದ್ರು. ಇವತ್ತು ಕರ್ನಾಟಕ ಜನ ದುರಹಂಕಾರಿ ಸಿದ್ದರಾಮಯ್ಯ ಹೋಗಬೇಕು ಎಂದು ಸಿಎಂ ಯಡಿಯೂರಪ್ಪನವರ ಪರ ತೀರ್ಪು ಕೊಟ್ಟಿದ್ದಾರೆ ಎಂದು ಹೇಳಿದರು.

ರಾಜೀನಾಮೆ ಕೊಡುವುದರ ಜೊತೆಗೆ ಮೊದಲು ಯಡಿಯೂರಪ್ಪನವರಿಗೆ ಕ್ಷಮೆ ಕೇಳಬೇಕು ಎಂದು ತೀರ್ಪು ಕೊಟ್ಟಿದ್ದಾರೆ. ಮಾನ ಮರ್ಯಾದೇ ಇದ್ರೆ ಇಷ್ಟೊತ್ತಿಗೆ ಕ್ಷಮೆ ಕೇಳಬೇಕಿತ್ತು. ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧದಲ್ಲಿ ಸಿದ್ದರಾಮಯ್ಯ ತೊಡೆ ತಟ್ಟುತ್ತಿದ್ದರು. ಈಗ ಫಲಿತಾಂಶ ಬಂದಿದೆ. ನಾಡಿನ ಜನರೇ ಇವರಿಗೆ ಶಿಕ್ಷೆ ಕೊಟ್ಟಿದ್ದಾರೆ ಎಂದು ಕುಟುಕಿದರು.

ಮಾನಮರ್ಯಾದೆ ಮುಚ್ಚುಕೊಂಡು ಇನ್ನು ಮೂರುವರೆ ವರ್ಷ ಗೃಹ ಬಂಧನದಲ್ಲಿ ಇರುವಂತೆ ಜನತೆ ಶಿಕ್ಷೆ ಕೊಟ್ಟಿದ್ದಾರೆ. ನಾನೇ‌ ಧೀರ‌ಶೂರ ಅಂತಿದ್ದವರಿಗೆ ಈಗ ಜನ ತಕ್ಕಪಾಠ ಕಲಿಸಿದ್ದಾರೆ ಎಂದು ಸೊಗಡು ಶಿವಣ್ಣ ವ್ಯಂಗ್ಯ ಮಾಡಿದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English