ಮಂಗಳೂರು : ಇತ್ತೀಚೆಗೆ ಮಂಗಳೂರು ಹಿಂಸಾಚಾರದಲ್ಲಿ ಬಲಿಯಾದ ಇಬ್ಬರ ಕುಟುಂಬಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ನ ಇಬ್ಬರು ನಾಯಕರು ಶನಿವಾರ ಬೆಳಗ್ಗೆ ಮಂಗಳೂರಿಗೆ ಆಗಮಿಸಿ ಪರಿಹಾರದ ಚೆಕ್ ವಿತರಿಸಿದ್ದಾರೆ.
ಕರ್ನಾಟಕ ಸರಕಾರ 10ಲಕ್ಷ ಘೋಷಿಸಿದ್ರು, ಮೃತ ಇಬ್ಬರು ಗಲಭೆಯಲ್ಲಿ ಗುರುತಿಸಿಕೊಂಡಿದ್ದರು ಎಂದು ಪೊಲೀಸರು ಪ್ರಥಮ ಮಾಹಿತಿ ವರದಿಯಲ್ಲಿ ನ್ಯಾಯಾಲಕ್ಕೆ ತಿಳಿಸಿದುದರಿಂದ ತಾತ್ಕಾಲಿಕ ವಾಗಿ ಪರಿಹಾರದ ಮೊತ್ತವನ್ನು ತಡೆಹಿಡಿಯಲಾಗಿದೆ. ಆದರೆ ಮಂಗಳೂರು ರಲ್ಲಾಗಲಿ, ಕರ್ನಾಟಕ ದಲ್ಲಾಗಲಿ ಅಸ್ತಿತ್ವವೇ ಇಲ್ಲದ ತೃಣಮೂಲ ಕಾಂಗ್ರೆಸ್ ಪರಿಹಾರ ನೀಡಿರುವುದರ ಹಿಂದೆ ರಾಜಕೀಯ ಇದೆ ಎಂದು ಬಿಜೆಪಿ ಸ್ನೇಹಿತರು ಹೇಳುತ್ತಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಗೆ ಬಲಿಯಾದ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಅದರ ವಿತರಣೆಗಾಗಿ ತೃಣಮೂಲ ಕಾಂಗ್ರೆಸ್ ನ ಮಾಜಿ ರೈಲ್ವೆ ಸಚಿವ ದಿನೇಶ್ ತ್ರಿವೇದಿ ಮತ್ತು ರಾಜ್ಯಸಭಾ ಸದಸ್ಯರಾದ ಎಂಡಿ ನದೀಮುಲ್ ಹಕ್ ಅವರು ಮಂಗಳೂರಿಗೆ ಆಗಮಿಸಿ ಚೆಕ್ ವಿತರಿಸಿ ಯು ಆಗಿದೆ.
Click this button or press Ctrl+G to toggle between Kannada and English