ದ್ವಿಚಕ್ರ ವಾಹನಗಳ ಢಿಕ್ಕಿ ; ಸವಾರಿಬ್ಬರು ಮೃತ್ಯು

4:15 PM, Wednesday, January 15th, 2020
Share
1 Star2 Stars3 Stars4 Stars5 Stars
(No Ratings Yet)
Loading...

Mani Accidentಬಂಟ್ವಾಳ: ದ್ವಿಚಕ್ರ ವಾಹನಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಸವಾರಿಬ್ಬರು ಮೃತಪಟ್ಟು, ಸಹಸವಾರೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಾಣಿ ಸಮೀಪದ ಕೊಡಾಜೆ ಎಂಬಲ್ಲಿ ಮಂಗಳವಾರ ಸಂಭವಿಸಿದೆ.

ಕಲ್ಲಡ್ಕ ಶಾಲಾಬಳಿ ನಿವಾಸಿ ಕರೀಂ ಎಂಬವರ ಪುತ್ರ ಮುಹಮ್ಮದ್ ಅಜ್ಮಲ್(19), ಮಾಣಿ ಬರೆನೆಕ್ಕರೆ ನಿವಾಸಿ ಮೋನಪ್ಪ ಪೂಜಾರಿ ಎಂಬವರ ಪುತ್ರ ಪರೀಕ್ಷಿತ್ (19) ಮೃತಪಟ್ಟ ದ್ವಿಚಕ್ರ ವಾಹನ ಸವಾರರಾಗಿದ್ದು, ಸ್ಥಳೀಯ ನಿವಾಸಿ, ಸಹಸವಾರ ಪದ್ಮನಾಭ ಗೌಡ (28) ಎಂಬವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

ಪರೀಕ್ಷಿತ್ ಹಾಗೂ ಪದ್ಮನಾಭ ಗೌಡ ಎಂಬವರು ಬೈಕ್ ನಲ್ಲಿ ಮಾಣಿ ಕಡೆಗೆ ತೆರಳುತ್ತಿದ್ದಾಗ ಅಜ್ಮಲ್ ಅವರು ಆಕ್ಟೀವಾದಲ್ಲಿ ಕೊಡಾಜೆ ಕಡೆಗೆ ಸಂಚರಿಸುತ್ತಿದ್ದಾಗ ಪೆರಾಜೆಯ ಮಠ ಬಳಿ ಈ ಅಪಘಾತ ಸಂಭವಿಸಿದೆ. ಘಟನೆಯಿಂದ ದ್ವಿಚಕ್ರ ವಾಹನ ಸವಾರಿಬ್ಬರಿಗೂ ಗಂಭೀರ ಗಾಯಗೊಂಡಿಗಿದ್ದು,ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ದ್ವಿಚಕ್ರ ವಾಹನಗಳೆರಡೂ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English