ನಾಲ್ಕೇರಿ ಸೊಡ್ಲೂರ್ ಕೇರಿಯಲ್ಲಿ ಹುಲಿದಾಳಿ : 3 ಹಸುಗಳು ಬಲಿ

12:26 PM, Thursday, February 13th, 2020
Share
1 Star2 Stars3 Stars4 Stars5 Stars
(No Ratings Yet)
Loading...

tiger

ಮಡಿಕೇರಿ : ದಕ್ಷಿಣ ಕೊಡಗಿನಲ್ಲಿ ಹುಲಿದಾಳಿ ಮುಂದುವರೆದಿದ್ದು, ಕಳೆದ ಒಂದು ವಾರದಲ್ಲಿ ಮೂರು ಹಸುಗಳು ಬಲಿಯಾಗಿವೆ. ನಾಲ್ಕೇರಿ ಗ್ರಾಮದ ಸೊಡ್ಲೂರ್ ಕೇರಿಯ ಮುಕ್ಕಾಟಿರ ದೀಪ ಎಂಬುವವರಿಗೆ ಸೇರಿದ ಗಬ್ಬದ ಹಸುವೊಂದು ಇಂದು ಹುಲಿದಾಹಕ್ಕೆ ಜೀವ ಕಳೆದುಕೊಂಡಿದೆ. ಇವರದ್ದೇ ಮತ್ತೊಂದು ಹಸುವನ್ನು ನಾಲ್ಕು ದಿನಗಳ ಹಿಂದೆಯಷ್ಟೇ ಹುಲಿ ಬಲಿ ತೆಗೆದುಕೊಂಡಿತ್ತು.

ಇದೇ ಗ್ರಾಮದ ತೀತಿರ ರವಿ ಎಂಬುವವರಿಗೆ ಸೇರಿದ ಹಸುವನ್ನು ಒಂದು ವಾರದ ಹಿಂದೆ ಹುಲಿ ಭಕ್ಷಿಸಿತ್ತು. ವನ್ಯಜೀವಿ ದಾಳಿಯಿಂದ ಆತಂಕಗೊಂಡಿರುವ ಗ್ರಾಮಸ್ಥರು ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English