ಕಂಬಳ ವೀರ ಶ್ರೀನಿವಾಸ್‌ ಗೌಡ ರವರಿಗೆ ಮುಖ್ಯಮಂತ್ರಿ ಯಡಿಯೂರಪ್ಪರಿಂದ ಸನ್ಮಾನ

10:12 AM, Tuesday, February 18th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Kambala-jockey

ಬೆಂಗಳೂರು : ಕಂಬಳದಲ್ಲಿ ವೇಗವಾಗಿ ಓಡುವ ಮೂಲಕ ಜನಮನ್ನಣೆಗೆ ಪಾತ್ರವಾಗಿರುವ ಶ್ರೀನಿವಾಸ್‌ ಗೌಡ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸನ್ಮಾನ ಮಾಡಿದ್ದಾರೆ.

ಈ ಸಂದರ್ಭ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಕಾರ್ಮಿಕ ಸಚಿವ ಅರಬೈಲ್ ಶಿವರಾಮ ಹೆಬ್ಬಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕಲ್ಪನಾ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಮಿಕ ಇಲಾಖೆಯ ವತಿಯಿಂದ ಶ್ರೀನಿವಾಸ ಗೌಡ ಅವರಿಗೆ ರೂ. 3 ಲಕ್ಷ ಮೊತ್ತದ ಚೆಕ್ ನೀಡಲಾಯಿತು.

ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಅವರು ತಮ್ಮ ಕಚೇರಿಯಲ್ಲಿ ಕಂಬಳ ಓಟಗಾರ ಶ್ರೀನಿವಾಸ ಗೌಡ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳು, ಶ್ರೀನಿವಾಸ ಅವರಿಗೆ ರೂ. 1 ಲಕ್ಷ ನೆರವು ನೀಡುವುದಾಗಿ ಪ್ರಕಟಿಸಿದರು.

ಸೋಮವಾರ ಶ್ರೀನಿವಾಸ್‌ ಗೌಡ ಅವರು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು, ಅವರೊಂದಿಗೆ ವಾರ್ತಾ ಇಲಾಖೆಯ ಅರುಣಕಾಂತ, ವರದಿಗಾರ ನಾಗರಾಜ, ಕೆ.ಗೋಪಾಲನ್‌ ಕಡಬ, ಹರ್ಷವರ್ಧನ್‌ ಪಡಿವಾಳ, ಶಕ್ತಿ ಪ್ರಸಾಸ್‌ ಶೆಟ್ಟಿ, ರಶ್ಮಿತ್‌ ಶೆಟ್ಟಿ, ಪ್ರದೀಪ್‌ ಚಂದ್ರ ಜೈನ್‌, ಸಚಿನ್‌ ಅಡಪ, ರಾಜೇಶ್‌ ಮಾರ್ನಾಡ್‌, ಯತೀಶ್‌ ಶೆಟ್ಟಿ, ದಿನೇಶ್‌ ಕೋಟ್ಯಾನ್‌, ಮನ್ಮಥ ಕೆಲ್ಲ, ಬಿ.ಸಿ. ರಮೇಶ್‌, ರಕ್ಷಿತ್‌ ಜೈನ್‌, ಜಿವಿತೇಶ್‌ ಕಡಂಬ ಇದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English