ಬಳ್ಳಾರಿ : ವಿಧಾನ ಪರಿಷತ್‌ ಸದಸ್ಯ ಸಿಎಂ ಇಬ್ರಾಹಿಂ ವಿರುದ್ಧ ಸಚಿವ ವಿ.ಸೋಮಣ್ಣ ವಾಗ್ದಾಳಿ

3:42 PM, Tuesday, February 25th, 2020
Share
1 Star2 Stars3 Stars4 Stars5 Stars
(No Ratings Yet)
Loading...

sommanna

ಬಳ್ಳಾರಿ : ವಿಧಾನ ಪರಿಷತ್‌ ಸದಸ್ಯ ಸಿಎಂ ಇಬ್ರಾಹಿಂ ವಿರುದ್ಧ ವಸತಿ ಸಚಿವ ವಿ.ಸೋಮಣ್ಣ ವಾಗ್ದಾಳಿ ನಡೆಸಿದ್ದಾರೆ.

ಬಳ್ಳಾರಿಯ ಮುಂಡರಗಿ ಪ್ರದೇಶ ವ್ಯಾಪ್ತಿಯಲ್ಲಿಂದು ವಸತಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಇಬ್ರಾಹಿಂ ಯಾವತ್ತಾದರೂ ನಿಜ ಹೇಳಿದ್ದಾರೆಯೇ? ಅವರು ಯಾವತ್ತಾದರೂ ಒಳ್ಳೆಯದನ್ನು ಮಾಡಿದ್ದಾರೆಯೇ? ನಮ್ಮೊಂದಿಗೆ ಅವರೂ ಕೂಡ ಇದ್ದರು. ಮೊದಲು ನಶೆ ಪುಡಿ ತಿಕ್ಕುತ್ತಿದ್ದರು. ಈಗ ವಯಸ್ಸಾಗಿದೆ ಅಲ್ವಾ, ನಶೆ ಬಿಟ್ಟಿರಬಹುದು. ಅದಕ್ಕೆ ಪಿತ್ತ ನೆತ್ತಿಗೇರಿರಬಹುದು ಎಂದು ಛೇಡಿಸಿದ್ದರು.

ಇಬ್ರಾಹಿಂ ಅವರು ಹಾಕುವ ನಶೆಪುಡಿಯ ಘಮಲು ಜಾಸ್ತಿಯಾಗಿ ಬಿಜೆಪಿ ಶಾಸಕರ ರಾಜೀನಾಮೆ ವಿಚಾರದ ಪ್ರಸ್ತಾಪ ಮಾಡಿದ್ದಾರೆ. 40 ವರ್ಷದಿಂದ ಅವರನ್ನು ನಾನು ನೋಡಿರುವೆ. ಅವರು ಯಾವತ್ತಾದರೂ ನಿಜ ಹೇಳಿದ್ದಾರಾ? ಎಂದು ವ್ಯಂಗ್ಯವಾಡಿದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English