ಗದಗ : ದೊರೆಸ್ವಾಮಿ ಅವರ ಬಗ್ಗೆ ಯತ್ನಾಳ್ ಅವಹೇಳನಕಾರಿ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಎಚ್ ಕೆ ಪಾಟೀಲ್ ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೊರೆಸ್ವಾಮಿ ನಮ್ಮ ರಾಜ್ಯ ಕಂಡಂತಹ ಅಪರೂಪದ ಹೋರಾಟಗಾರ. ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ, ಪತ್ರಕರ್ತರಾಗಿ ಕರ್ನಾಟಕದ ಬಗ್ಗೆ, ಕನ್ನಡ ಭಾಷೆಯ ಬಗ್ಗೆ ಹೋರಾಟವನ್ನು, ಹೋರಾಟದ ಬದುಕನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ಸಮಾಜಕ್ಕೆ ಮಾರ್ಗದರ್ಶನ ಮಾಡ್ತಾ ಸರಕಾರದಲ್ಲಿ ಆಗಿರುವ ಅನ್ಯಾಯಗಳನ್ನು ಸರಿಪಡಿಸುವುದರಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಪಾಕಿಸ್ತಾನ ಪರ ಎಂದಿರುವ ಮಾತುಗಳು ಸರಿಯಲ್ಲ. ಇದು ಯಾವ ರಾಜಕಾರಣಿಗೂ ಶೋಭೆ ತರಲ್ಲ ಎಂದೂ ಗದಗದಲ್ಲಿ ಮಾಜಿ ಸಚಿವ ಎಚ್.ಕೆ. ಪಾಟೀಲ್, ದೊರೆಸ್ವಾಮಿ ವಿರುದ್ಧ ಹೇಳಿಕೆ ನೀಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಿಡಿ ಕಾರಿದ್ದಾರೆ.
ಅಲ್ಲದೆ, ನಾನು ಯತ್ನಾಳ್ ಅವರಿಗೆ ನೇರವಾಗಿ ಹೇಳೋದಕ್ಕೆ ಬಯಸ್ತೀನಿ. ತಕ್ಷಣ ದೊರೆಸ್ವಾಮಿಯವರ ಕ್ಷಮೆ ಕೇಳಿ. ಈ ವಿವಾದಕ್ಕೆ ಅಂತ್ಯ ಹಾಡಿ. ಕರ್ನಾಟಕಕ್ಕೆ ಹಾಗೂ ದೊರೆಸ್ವಾಮಿಯವರಿಗೆ ಕ್ಷಮೆ ಕೇಳದೇ ಹೋದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಗದಗದಲ್ಲಿ ಕಾಂಗ್ರೆಸ್ ಶಾಸಕ ಎಚ್.ಕೆ. ಪಾಟೀಲ್ ಎಚ್ಚರಿಕೆ ಹಾಕಿದ್ದಾರೆ.
Click this button or press Ctrl+G to toggle between Kannada and English