ಮಂಜುನಾಥ ಸ್ವಾಮಿ ದೇವರ ನಂದಾದೀಪ ನಂದಿ ಹೋಗಿದೆ ಎಂದು ಕಿಡಿಗೇಡಿಗಳ ಅಪಪ್ರಚಾರ : ಹೆಗ್ಗಡೆ ಸ್ಪಷ್ಟನೆ

12:09 AM, Saturday, March 28th, 2020
Share
1 Star2 Stars3 Stars4 Stars5 Stars
(No Ratings Yet)
Loading...

Nanda deepaಧರ್ಮಸ್ಥಳ : ಇತ್ತೀಚೆಗೆ ಕಾಪು ಮಾರಿಗುಡಿಯಲ್ಲಿ ಕಪ್ಪು ಚಹಾಕ್ಕೆ ಬೆಲ್ಲ ಸೇರಿಸಿ ಕುಡಿದರೆ ಕೊರೊನಾ ವಾಸಿಯಾಗುತ್ತದೆ ಎಂದು ಪ್ರಚಾರ ಮಾಡಿದಂತೆ. ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ನಂದಾದೀಪ ನಂದಿ ಹೋಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸಿದ ಹಿನ್ನಲೆಯಲ್ಲಿ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಸ್ಪಷ್ಟನೆ ನೀಡಿದ್ದು, ಅಂತಹ ಅಪಪ್ರಚಾರದ ಮಾತುಗಳಿಗೆ ಯಾರೂ ಕಿವಿಕೊಡಬಾರದು ಎಂದು ಮನವಿ ಮಾಡಿದ್ದಾರೆ.

ದೇಗುಲದ ಬಾಗಿಲು ರಾತ್ರಿ 8 ಗಂಟೆಗೆ ಹಾಕಲಾಗುತ್ತದೆ. ಬೆಳಗ್ಗೆ ಐದು ಗಂಟೆಗೆ ಬಾಗಿಲು ತೆರೆಯುತ್ತಾರೆ, ಮಧ್ಯದಲ್ಲಿ ಯಾರು ಪ್ರವೇಶ ಮಾಡುವುದಿಲ್ಲ. ನಂತರ ಪ್ರವೇಶ ಮಾಡಿದವರು ಯಾರು? ನಂದಾದೀಪ ನಂದಿ ಹೋಗಿದನ್ನು ನೋಡಿದ್ದು ಯಾರು? ಇದು ಭಕ್ತರ ಭಾವನೆ, ನಂಬಿಕೆ ಜೊತೆ ಕಿಡಿಗೇಡಿಗಳು ಮಾಡಿದ ಸುಳ್ಳು ವದಂತಿಯಾಗಿದೆ ಎಂದಿದ್ದಾರೆ.

ವದಂತಿಯಿಂದ ದೂರ ಇದ್ದು, ಕೋವಿಡ್-19 ದೂರ ಮಾಡಲು ಮನೆಯಲ್ಲಿ ಮಂಜುನಾಥನಿಗೆ ಪ್ರಾಥನೆ ಮಾಡಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಸ್ಪಷ್ಟಪಡಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English