ಕೇರಳದ ರೋಗಿಗಳು ಮಂಗಳೂರಿಗೆ, ಒಬ್ಬ ಚಿಕಿತ್ಸೆ ಲಭ್ಯವಿಲ್ಲದ ವಾಪಾಸ್

1:14 PM, Thursday, April 9th, 2020
Share
1 Star2 Stars3 Stars4 Stars5 Stars
(No Ratings Yet)
Loading...

kerala ಮಂಗಳೂರು : ಹೃದಯ ಸಂಬಂಧಿ ಕಾಯಿಲೆ ಮತ್ತು ಮೆದುಳು ಸಂಬಂಧಿ ಕಾಯಿಲೆಯ ರೋಗಿ ಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರೂ ಮೆದುಳು ಸಂಬಂಧಿ ರೋಗಿಗೆ ಅಲ್ಲಿ ಚಿಕಿತ್ಸೆ ಲಭ್ಯವಿಲ್ಲದ ಕಾರಣ ಮತ್ತೆ ಕಣ್ಣೂರಿನ ಆಸ್ಪತ್ರೆಗೆ ಸಾಗಿಸಲಾಯಿತು.

ಜಿಲ್ಲಾ ವೈದ್ಯರ ಪ್ರಮಾಣ ಪತ್ರ ಅಗತ್ಯವಿರುವುದರಿಂದ ಕಾಸರಗೋಡು ಸರಕಾರಿ ಆಸ್ಪತ್ರೆಯ ಇಬ್ಬರು ವೈದ್ಯರು ಮತ್ತು ಆರೋಗ್ಯ ಸಿಬಂದಿಯನ್ನು ತಾತ್ಕಾಲಿಕವಾಗಿ ಗಡಿ ಪ್ರದೇಶವಾದ ತಲಪಾಡಿಯಲ್ಲಿ ನಿಯೋಜಿಸಿದ್ದು, ಗಡಿಭಾಗದಲ್ಲಿಯೇ ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಮಾಡಲಾಗಿದೆ. ಇಲ್ಲೇ ಕೋವಿದ್‌ -19 ತಪಾಸಣೆ ನಡೆಯ ಪ್ರಾಥಮಿಕ ವರದಿಯ ಪ್ರಮಾಣ ಪತ್ರವನ್ನೂ ನೀಡಲಾಗುತ್ತಿದೆ. ಇದರೊಂದಿಗೆ ಎರಡು ಸರಕಾರಿ ಆ್ಯಂಬುಲೆನ್ಸ್‌ಗಳನ್ನು ವ್ಯವಸ್ಥೆ ಮಾಡಿದ್ದು, ಖಾಸಗಿ ಆ್ಯಂಬುಲೆನ್ಸ್‌ ಗಳಲ್ಲಿ ರೋಗಿಗಳನ್ನು ತಲಪಾಡಿ ಗಡಿ ಪ್ರದೇಶದ ವರೆಗೆ ತಂದರೆ ಪ್ರಮಾಣ ಪತ್ರ ಸಿದ್ಧವಾದ ಬಳಿಕ ಸರಕಾರಿಆ್ಯಂಬುಲೆನ್ಸ್‌ಗಳ ಮೂಲಕ ಮಂಗಳೂರು ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಲಾಗಿದೆ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English