ಭಟ್ಟಿ ಸಾರಾಯಿ ಘಟಕಕ್ಕೆ ಅಬಕಾರಿ ಇಲಾಖೆ ದಾಳಿ

6:31 PM, Thursday, April 9th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Bhatti sharaiಮಂಗಳೂರು: ಅಬಕಾರಿ ಇಲಾಖೆ ಅಧಿಕಾರಿಗಳು, ಮಂಗಳೂರಿನ ಜಪ್ಪಿನ ಮೊಗರು ಗ್ರಾಮದ ನ್ಯೂ ಪಡ್ಪು ಎಂಬಲ್ಲಿ ರಿಚರ್ಡ್‍ ಡಿಸೋಜಾ ಎಂಬವರ ಮನೆ ವಠಾರಕ್ಕೆ ದಾಳಿ ನಡೆಸಿ, ಅಕ್ರಮವಾಗಿ ಭಟ್ಟಿ ಸಾರಾಯಿ ತಯಾರಿಸುತ್ತಿದ್ದುದನ್ನು ಪತ್ತೆ ಹಚ್ಚಿದ್ದಾರೆ. ಈ ಸಂದರ್ಭದಲ್ಲಿ ಮೂರುವರೆ ಲೀಟರ್ ಲೀಟರ್ ಭಟ್ಟಿ ಸಾರಾಯಿ ಮತ್ತು ಭಟ್ಟಿ ಸಾರಾಯಿ ತಯಾರಿಕಾ ಸಾಮಾಗ್ರಿಗಳನ್ನು ಜಫ್ತಿ ಮಾಡಿ ಪ್ರಕರಣದಾಖಲಿಸಲಾಗಿದೆ.

ದ.ಕ.ಜಿಲ್ಲಾಅಬಕಾರಿ ಡಿಸಿ ಶೈಲಜಾಕೋಟೆ, ಡಿವೈಎಸ್‍ಪಿ ಶಿವಪ್ರಸಾದ್‍ಅವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ವಲಯ 2ರ ಅಬಕಾರಿ ಇನ್ಸ್ ಪೆಕ್ಟರ್  ರತ್ನಾಕರ ರೈ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿಉಪನಿರೀಕ್ಷಕ ಆಶಿಸ್, ಸಿಬ್ಬಂದಿಗಳಾದ ಬಸವರಾಜತೋರೆ, ನವೀನ್ ನಾಯ್ಕ್ ಮತ್ತುಚಾಲಕ ಹರಿಯಪ್ಪಇದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English