ಶಿವ ಶರಣನಿಗೆ ಶರಣೆಂದೆ – ನಾಳೆ ಬಸವ ಜಯಂತಿ

5:53 PM, Saturday, April 25th, 2020
Share
1 Star2 Stars3 Stars4 Stars5 Stars
(No Ratings Yet)
Loading...

Basavanna ಕಾಯಕ ಯೋಗಿಯೇ
ಮಹಾನ್ ತಪಸ್ವಿಯೇ
ವಿದ್ವತ್ತಿನ ಪುಣ್ಯ ಪುರುಷನೇ
ಅಣ್ಣ ಬಸವಣ್ಣನೇ, ನಿನಗೆ
ನನ್ನ ಶರಣು ಶರಣಾರತಿ. //1//

ಪಂಚ ನದಿಗಳ ನಾಡೆನಿಸಿದ
ವಿಜಯಪುರ ಪ್ರಾಂತದ
ಬಾಗೇವಾಡಿ ಗ್ರಾಮದಲಿ
ಮಾದರಸ ಮಾದಲಾಂಬಿಕೆ
ಮಾತೃ ಪಿತೃವಿನ ಉದರದಲಿ
ಜನ್ಮಿಸೀ ಬಂದಾತನೇ
ಅಣ್ಣ ಬಸವಣ್ಣನೇ, ನಿನಗೆ
ನನ್ನ ನಮೋ ನಮಃ //2//

ಕಾಯಕವೇ ಕೈಲಾಸವೆಂದು
ದಯವಿಲ್ಲದ ಧರ್ಮದಾವುದೆಂದು
ಸಕಲ ಪ್ರಜೆಗಳಿಗೆ ನೀ ತಿಳಿಸಿದೆ,
ಅವನಾರವ – ಇವನಾರವ ಎನ್ನದೆ
ಇವನಮ್ಮವ – ಅವನಮ್ಮವನೆಂದು
ಸಕಲರಿಗೆ ಕೂಡಿ ಬಾಳುವುದ ಕಲಿಸಿದೆ,
ಪ್ರಜಾ ಕಲ್ಯಾಣಕ್ಕಾಗಿ ಬಂದಾತನೇ
ಅಣ್ಣ ಬಸವಣ್ಣನೇ, ನಿನಗೆ
ನನ್ನ ಸಾಷ್ಟಾಂಗ ನಮಸ್ಕಾರಗಳು. //3//

ಕರುನಾಡ ಉಸಿರು ನೀನೇ
ಕರುನಾಡ ಹಸಿರು ನೀನೇ
ನೀ ನುಡಿದ ತತ್ವಗಳೇ
ನಮಗಾದರ್ಶತಾನೇ,
ಕರುನಾಡ ಬೆಳಗಿಸಿದ
ಸಿರಿಭುವನ ಜ್ಯೋತಿಯು
ಕೂಡಲ ಸಂಗಮದಿ
ಲಿಂಗೈಕ್ಯವಾಯಿತು.
ಅಣ್ಣ ಬಸವಣ್ಣನಿಗಿಂದು
ಕುಲ – ಕೋಟಿ ನಮನಗಳು. //4//

guttedar✍ ಮಂಜುನಾಥ ಗುತ್ತೇದಾರ.
ಸಾ// ದೇವಸೂಗೂರು.
ತಾ//ಜಿ//ರಾಯಚೂರು.
ಮೋ.ನಂ – 9632759691
ಇಮೇಲ್ – manjunatha071@gmail.com

1 ಪ್ರತಿಕ್ರಿಯೆ - ಶೀರ್ಷಿಕೆ - ಶಿವ ಶರಣನಿಗೆ ಶರಣೆಂದೆ – ನಾಳೆ ಬಸವ ಜಯಂತಿ

  1. ಆನಂದ ನಿಂಗದಳ್ಳಿ, ದೇವಸೂಗೂರು

    ನಿನ್ನ ಈ ಸಾದನೆ ದೇಶದ ಮೂಲೆ ಮೂಲೆಗಳಲ್ಲಿ ಪ್ರಚಾರವಾಗಲಿ ಎಲ್ಲರಿಗೂ ಚಿರಪರಿಚಿತವಾಗಲಿ ಜಯವಾಗಲಿ ಈ ನಿನ್ನ ಸಾಧನೆಗೆ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English