ಕಾಯಕ ಯೋಗಿಯೇ
ಮಹಾನ್ ತಪಸ್ವಿಯೇ
ವಿದ್ವತ್ತಿನ ಪುಣ್ಯ ಪುರುಷನೇ
ಅಣ್ಣ ಬಸವಣ್ಣನೇ, ನಿನಗೆ
ನನ್ನ ಶರಣು ಶರಣಾರತಿ. //1//
ಪಂಚ ನದಿಗಳ ನಾಡೆನಿಸಿದ
ವಿಜಯಪುರ ಪ್ರಾಂತದ
ಬಾಗೇವಾಡಿ ಗ್ರಾಮದಲಿ
ಮಾದರಸ ಮಾದಲಾಂಬಿಕೆ
ಮಾತೃ ಪಿತೃವಿನ ಉದರದಲಿ
ಜನ್ಮಿಸೀ ಬಂದಾತನೇ
ಅಣ್ಣ ಬಸವಣ್ಣನೇ, ನಿನಗೆ
ನನ್ನ ನಮೋ ನಮಃ //2//
ಕಾಯಕವೇ ಕೈಲಾಸವೆಂದು
ದಯವಿಲ್ಲದ ಧರ್ಮದಾವುದೆಂದು
ಸಕಲ ಪ್ರಜೆಗಳಿಗೆ ನೀ ತಿಳಿಸಿದೆ,
ಅವನಾರವ – ಇವನಾರವ ಎನ್ನದೆ
ಇವನಮ್ಮವ – ಅವನಮ್ಮವನೆಂದು
ಸಕಲರಿಗೆ ಕೂಡಿ ಬಾಳುವುದ ಕಲಿಸಿದೆ,
ಪ್ರಜಾ ಕಲ್ಯಾಣಕ್ಕಾಗಿ ಬಂದಾತನೇ
ಅಣ್ಣ ಬಸವಣ್ಣನೇ, ನಿನಗೆ
ನನ್ನ ಸಾಷ್ಟಾಂಗ ನಮಸ್ಕಾರಗಳು. //3//
ಕರುನಾಡ ಉಸಿರು ನೀನೇ
ಕರುನಾಡ ಹಸಿರು ನೀನೇ
ನೀ ನುಡಿದ ತತ್ವಗಳೇ
ನಮಗಾದರ್ಶತಾನೇ,
ಕರುನಾಡ ಬೆಳಗಿಸಿದ
ಸಿರಿಭುವನ ಜ್ಯೋತಿಯು
ಕೂಡಲ ಸಂಗಮದಿ
ಲಿಂಗೈಕ್ಯವಾಯಿತು.
ಅಣ್ಣ ಬಸವಣ್ಣನಿಗಿಂದು
ಕುಲ – ಕೋಟಿ ನಮನಗಳು. //4//
✍ ಮಂಜುನಾಥ ಗುತ್ತೇದಾರ.
ಸಾ// ದೇವಸೂಗೂರು.
ತಾ//ಜಿ//ರಾಯಚೂರು.
ಮೋ.ನಂ – 9632759691
ಇಮೇಲ್ – manjunatha071@gmail.com
Click this button or press Ctrl+G to toggle between Kannada and English
April 26th, 2020 at 07:15:52
ನಿನ್ನ ಈ ಸಾದನೆ ದೇಶದ ಮೂಲೆ ಮೂಲೆಗಳಲ್ಲಿ ಪ್ರಚಾರವಾಗಲಿ ಎಲ್ಲರಿಗೂ ಚಿರಪರಿಚಿತವಾಗಲಿ ಜಯವಾಗಲಿ ಈ ನಿನ್ನ ಸಾಧನೆಗೆ