ಕುಕ್ಕೆ ಸುಬ್ರಹ್ಮಣ್ಯ : 237 ಸರ್ಪ ಸಂಸ್ಕಾರ ಕ್ರಿಯಾಕರ್ತರಿಗೆ ತಲಾ 5,000 ರೂ. ಮೌಲ್ಯದ ಚೆಕ್ ವಿತರಣೆ

7:59 PM, Saturday, May 16th, 2020
Share
1 Star2 Stars3 Stars4 Stars5 Stars
(No Ratings Yet)
Loading...

Angara MLAಸುಳ್ಯ: ಕುಕ್ಕೆಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ನಿತ್ಯ ನಡೆಯುತ್ತಿದ್ದ ಸರ್ಪ ಸಂಸ್ಕಾರ ಪೂಜೆ ಕೋವಿಡ್-19 ಲಾಕ್ಡೌನ್ನಿಂದಾಗಿ ಸ್ಥಗಿತಗೊಂಡಿತ್ತು.  ಇದರಿಂದಾಗಿ ಕಷ್ಟಕ್ಕೆ ಸಿಲುಕಿರುವ ಕ್ರಿಯಾಕರ್ತರಿಗೆ ಗೌರವ ಧನವನ್ನು ಶಾಸಕ ಎಸ್. ಅಂಗಾರ ಅವರು ಶನಿವಾರ ವಿತರಿಸಿದರು.

ಒಟ್ಟು 237 ಮಂದಿ ಸರ್ಪ ಸಂಸ್ಕಾರ ಕ್ರಿಯಾಕರ್ತರಿಗೆ ತಲಾ 5,000 ರೂ. ಮೌಲ್ಯದ ಚೆಕ್ ನೀಡಿದರು. ಕ್ರಿಯಾಕರ್ತರ ಪರವಾಗಿ ದೇವಸ್ಥಾನದ ವತಿಯಿಂದ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಧನ ಸಹಾಯಕ್ಕೆ ಮನವಿ ಸಲ್ಲಿಸಲಾಗಿತ್ತು.

ಧನ ಸಹಾಯ ವಿತರಿಸಿದ ಶಾಸಕ ಎಸ್.ಅಂಗಾರ ಕ್ರಿಯಾಕರ್ತರ ಮನವಿಗೆ ಸ್ಪಂದಿಸಿ ಮುಜುರಾಯಿ ಸಚಿವರ ಶಿಫಾರಸಿನಂತೆ ಧನ ಸಹಾಯವನ್ನು ಎಸ್.ಅಂಗಾರ ವಿತರಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English