ನೇತ್ರಾವತಿ ನದಿಗೆ ಹಾರಿದ ಹರೇಕಳದ ಯುವಕನ ಶವ ಜೆಪ್ಪುಪಟ್ನದಲ್ಲಿ ವಾರದ ಬಳಿಕ ಪತ್ತೆ

10:08 PM, Wednesday, July 8th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Kishor ಉಳ್ಳಾಲ :  ನಾಪತ್ತೆಯಾಗಿದ್ದ ಹರೇಕಳದ ಯುವಕನ ಶವ ಬುಧವಾರ ಜೆಪ್ಪುಪಟ್ನ ಸಮೀಪ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತದೇಹವನ್ನು ಹರೇಕಳ ದ ಕೊಲ್ಕೆ ಶಾಲೆ ಬಳಿಯ ಕಿಶೋರ್ ಅಡ್ಯಂತಾಯ (36) ಎಂದು ಪತ್ತೆಹಚ್ಚಲಾಗಿದೆ.

ಮನೆಯಲ್ಲಿ ತಂದೆ ಮತ್ತು ಮಗ ಇಬ್ಬರೇ ಇದ್ದು ಜೀವನದಲ್ಲಿ ಜಿಗುಪ್ಸೆ ಹೊಂದಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ನೇತ್ರಾವತಿ ಸೇತುವೆಯಲ್ಲಿ ಕೊಡೆ ಪತ್ತೆಯಾಗಿತ್ತು ಆದರೆ ಕೊಡೆ ಪತ್ತೆಯಾದ ಕುರಿತು ಯಾವುದೇ ಠಾಣೆಯಲ್ಲಿ ದೂರು ದಾಖಲಾಗಿರಲಿಲ್ಲ. ಯುವಕ ನಾಪತ್ತೆಯಾಗಿ ಎರಡು ದಿನಗಳ ಬಳಿಕ ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು. ಆದರೆ ಬುಧವಾರ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

ವಿಪರ್ಯಾಸವೆಂದರೆ ಆತ್ಮಹತ್ಯೆ ತಡೆಗೆ ಅತ್ತ ಶಾಸಕ ವೇದವ್ಯಾಸ ಕಾಮತ್ ಸೇತುವೆಗೆ ತಡೆ ಬೇಲಿ ಹಾಕುವ ಕಾಮಗಾರಿಗೆ ಶಿಲನ್ಯಾಸ ನೆರವೇರಿಸಿದ ದಿನದಂದೇ ಕೊಡೆ ಪತ್ತೆಯಾಗಿತ್ತು ಆದರೆ ಈ ಕುರಿತು ಕಂಕನಾಡಿ ಪೊಲೀಸರಿಗೆ ಯಾವುದೇ ಮಾಹಿತಿ ಇರಲಿಲ್ಲ.

Kishor

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English