ದಿನ ಭವಿಷ್ಯ : ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ಅವರಿಂದ ದ್ವಾದಶ ರಾಶಿ ಫಲಗಳ ಮಾರ್ಗದರ್ಶನ

6:00 AM, Friday, July 17th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

annapoorneshwariಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150

ಮೇಷ ರಾಶಿ
ಬಹು ಆಕಾಂಕ್ಷಿತ ಕಾರ್ಯವು ಕೈಗೂಡಲು ಸನ್ನಿಹಿತವಾಗಿದೆ. ನಿಮ್ಮ ಯೋಚನಾಲಹರಿ ಹೊಸ ಆಯಾಮದಿಂದ ಕೂಡಿದ್ದು ನವೀನ ಕಾರ್ಯಗಳಿಗೆ ಪ್ರೇರಣೆ ನೀಡಲಿದೆ. ಆರ್ಥಿಕ ಬಂಡವಾಳದ ವಿಷಯವಾಗಿ ಸಮಸ್ಯೆಗಳು ಬರಬಹುದು. ಕುಟುಂಬದವರ ಬಳಿ ನಿಮ್ಮ ಯೋಜನೆ ಪ್ರಸ್ತಾಪಿಸುವುದರಿಂದ ಸಕಾರಾತ್ಮಕ ಫಲಿತಾಂಶ ದೊರೆಯುತ್ತದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಿಂತಿರುವ ಕಾರ್ಯಗಳು ಪುನಶ್ಚೇತನ ಗೊಳ್ಳಲಿದೆ. ಆತ್ಮೀಯರಿಂದ ನಂಬಿಕೆದ್ರೋಹ ವಾಗುವ ಸಾಧ್ಯತೆ ಕಾಣಬಹುದು, ಆದಷ್ಟು ನಿಮ್ಮ ಯೋಜನೆಗಳನ್ನು ಗೌಪ್ಯವಾಗಿ ಕಾಪಾಡಿಕೊಳ್ಳಿ. ಮಕ್ಕಳ ವಿಷಯವಾಗಿ ನಿಮ್ಮಲ್ಲಿ ಬೇಸರ ಮೂಡಬಹುದು. ಸಂಗಾತಿಯ ಕಠೋರ ಮಾತುಗಳು ನಿಮ್ಮ ಮನಸ್ಸಶಾಂತಿಯನ್ನು ಕದಡ ಬಹುದಾಗಿದೆ, ಆದಷ್ಟು ನಿಮ್ಮ ಈ ದಿನದ ಕಾರ್ಯ ಕಲಾಪಗಳಲ್ಲಿ ತಾಳ್ಮೆ ಅವಶ್ಯಕವಾಗಿದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನಿಮ್ಮನ್ನು ಅನಗತ್ಯವಾಗಿ ಪ್ರೇರೇಪಣೆ ನೀಡಿ ಅಚಾತುರ್ಯವಾದಂತಹ ಕಾರ್ಯಗಳಿಗೆ ಎಡೆ ಮಾಡಿಕೊಳ್ಳಲಿದ್ದಾರೆ ಆದಷ್ಟು ಎಚ್ಚರವಹಿಸಿ. ನಿಮ್ಮ ಸುತ್ತಲಿರುವ ಹೊಗಳುವ ಜನಗಳ ನಂಬುವುದನ್ನು ಕಡಿಮೆ ಮಾಡುವುದು ಒಳ್ಳೆಯದು. ನಿಮ್ಮ ವ್ಯವಸ್ಥಿತ ಕಾರ್ಯಗಳಿಗೆ ಹಾನಿ ತಂದೊಡ್ಡುವ ದುರುದ್ದೇಶಗಳು ಕಂಡುಬರುತ್ತದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಹಣ ಗಳಿಕೆ ವಿಷಯದಲ್ಲಿ ನಿಮ್ಮ ವ್ಯವಹಾರ ಚಾತುರ್ಯ ತುಂಬಾ ಉತ್ತಮವಾಗಿ ಮೂಡಿಬರುತ್ತದೆ. ಆರ್ಥಿಕವಾಗಿ ಬಲಿಷ್ಠವಾಗಿರುತ್ತೀರಿ. ಕುಟುಂಬದಿಂದ ನಿಮ್ಮ ಕೆಲಸಗಳಿಗೆ ಸಹಾಯ ಮತ್ತು ಬಂಡವಾಳ ದೊರೆಯಲಿದೆ. ಪತ್ನಿಯ ಸಾಂಗತ್ಯದಲ್ಲಿ ವಿಶೇಷವಾದ ಹಾಸ್ಯ ಚಟಾಕಿ ಗಳಲ್ಲಿ ಕಾಲ ಕಳೆಯುತ್ತೀರಿ. ನವೀನ ಕಾರ್ಯಗಳಿಗೆ ಅಡಿಪಾಯ ಹಾಕುವ ಸಾಧ್ಯತೆ ಕಾಣಬಹುದು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಸಹವಾಸ ದೋಷದಿಂದ ನಿಮ್ಮ ವ್ಯಕ್ತಿತ್ವ ಅದಪತನ ವಾಗಬಹುದು, ಉತ್ತಮವಾದ ಸಂಘವನ್ನು ಬೆಳೆಸಿಕೊಳ್ಳಿ. ನಿಮ್ಮ ಕಾರ್ಯಗಳ ಅದರ ರೂಪರೇಷೆ ವ್ಯವಸ್ಥಿತವಾಗಿ ಇರಲಿ, ಮುಂದೆ ಬರಲಿರುವ ಯೋಜನೆಗಳಿಗೆ ಇಂದಿನಿಂದಲೇ ತಾಲೀಮು ನಡೆಸಿ, ಇದು ನಿಮ್ಮ ಜೀವನಕ್ಕೆ ಅತ್ಯಮೂಲ್ಯ ವಾಗಿರುತ್ತದೆ. ಮನಸ್ಸಿನಲ್ಲಿ ಮೂಡುವ ಆಲೋಚನೆಗಳು ಗೊಂದಲ ತರಿಸಬಹುದು. ಕೆಲವು ವಿಷಯಗಳು ದೂರದಿಂದ ಚೆಂದ ಕಾಣುತ್ತದೆ ಆದರೆ ಅದರ ಅಸ್ತಿತ್ವವು ನಿಮಗೆ ಸಂಕಟ ನೀಡಬಹುದು. ಮನೋ ಕಾಮನೆಗಳನ್ನು ನಿಗ್ರಹಿಸುವುದು ಒಳಿತು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಪತ್ನಿಯ ಮಾತುಗಳನ್ನು ಅಲಕ್ಷಿಸದೆ ಪರಿಗಣನೆಗೆ ತೆಗೆದುಕೊಳ್ಳುವುದು ಮುಖ್ಯ. ಸ್ವಾರ್ಥಿ ಜನಗಳಿಂದ ಆದಷ್ಟು ಅಂತರ ಕಾಯ್ದುಕೊಳ್ಳಿ. ನಿಮ್ಮ ಹತ್ತಿರ ತಮ್ಮ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ತಂತ್ರ ಮಾಡಲಿದ್ದಾರೆ. ನೀವು ಭೋಗವಿಲಾಸತನವನ್ನು ಪ್ರದರ್ಶಿಸುವುದು ಒಳ್ಳೆಯದಲ್ಲ. ವ್ಯವಹಾರದಲ್ಲಿ ನೈಜತೆ ಮತ್ತು ನೇರವಾಗಿರಲಿ ನಿಮ್ಮ ಮಾತು ಇದು ಉತ್ತಮ ವ್ಯಾಪಾರಕ್ಕೆ ಸಾಕ್ಷಿಯಾಗಲಿದೆ. ಇತರರ ವಿಷಯಗಳನ್ನು ಮನಸ್ಸಿಗೆ ತೆಗೆದುಕೊಂಡು ಗೊಂದಲ ಮಾಡಿಕೊಳ್ಳಬೇಡಿ. ಸಂಗಾತಿಯೊಡನೆ ಪ್ರೇಮದಿಂದ ನಡೆದುಕೊಳ್ಳಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಅಂದುಕೊಂಡ ಕಾರ್ಯಗಳು ಕೈಗೂಡಲಿದೆ. ನಿಮ್ಮ ಹೊಸ ಆಲೋಚನೆಯು ಉತ್ತಮವಾದ ಕೆಲಸಕ್ಕೆ ಪ್ರೇರಣೆ ನೀಡುತ್ತದೆ. ಹಣಕಾಸಿನ ವಿಷಯದಲ್ಲಿ ಅಡೆತಡೆಗಳು ಕಂಡುಬರಲಿದೆ. ಕುಟುಂಬದ ಬೆಂಬಲ ಪಡೆಯಲು ನೀವು ಮುಂದಾಗಿ. ನಿಮ್ಮ ಕೆಲವು ಕಾರ್ಯಗಳು ತಟಸ್ಥವಾಗಿದೆ ಅದನ್ನು ಪುನಶ್ಚೇತನಗೊಳಿಸಲು ಪ್ರಯತ್ನಿಸುವುದು ಒಳ್ಳೆಯದು. ವ್ಯವಹಾರದಲ್ಲಿ ನಿಮ್ಮ ಆಲೋಚನೆ ತ್ವರಿತಗತಿಯಲ್ಲಿ ಇರಲಿ. ಸಂಗಾತಿಯೊಡನೆ ಬಾಂಧವ್ಯ ಬೆಳೆಸುವ ಪ್ರಯತ್ನ ಮಾಡಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ನಿಮ್ಮ ಕೆಲಸದ ಬಗೆಗಿನ ನಿಷ್ಠೆ ಮೆಚ್ಚುಗೆ ಗಳಿಸುತ್ತದೆ. ಯೋಜನೆಗಳು ಸಕಾಲದಲ್ಲಿ ನಿಮ್ಮ ಕೈಹಿಡಿಯುವುದು ನಿಶ್ಚಿತ. ಅಧಿಕಾರಿ ವರ್ಗಗಳಿಂದ ಭರಪೂರ ಪ್ರಶಂಸೆ ಸಿಗಲಿದೆ. ಕೆಲಸದ ಒತ್ತಡದಿಂದ ಆಯಾಸ ಹೆಚ್ಚಾಗಬಹುದು. ಆರೋಗ್ಯದ ಕಡೆ ಗಮನ ನೀಡಿ. ನೀವು ಯಾರಿಗೂ ತಿಳುವಳಿಕೆ ಹೇಳುವ ಪ್ರಯತ್ನ ಮಾಡದಿರುವುದು ಸೂಕ್ತ. ಸ್ನೇಹಿತರ ಭೇಟಿಯಿಂದ ಸಂತೋಷದ ವಾತಾವರಣ ಇರಲಿದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಕೆಲಸವನ್ನು ಶ್ರದ್ಧೆಯಿಂದ ಆರಂಭಿಸಿ ಯಾವುದೇ ಭಯಬೇಡ. ನೀವು ನಡೆಸುವ ಕಾರ್ಯಗಳು ಉತ್ತಮವಾದ ಕ್ಷಮತೆಯಿಂದ ಕೂಡಿರಲಿದೆ. ಆದಾಯದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ನಿಮ್ಮ ಮನಸ್ಥಿತಿಗೆ ಯಾವುದೇ ಚಂಚಲತೆಯನ್ನು ಬರದಂತೆ ನೋಡಿಕೊಳ್ಳಿ. ಕೆಲಸದ ನಿಖರ ಲೆಕ್ಕಚಾರವನ್ನು ಮೊದಲೇ ನಿರ್ಧರಿಸಿ. ಕುಟುಂಬದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ, ಆದಷ್ಟು ಶುಭ್ರತೆಗೆ ಒತ್ತು ನೀಡುವುದು ಒಳ್ಳೆಯದು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಹತಾಶ ಮನಸ್ಥಿತಿಯಿಂದ ಹೊರಬರಲು ಪ್ರಯತ್ನಪಡಿ. ನಿಮ್ಮ ಕಾರ್ಯಗಳಿಗೆ ಆತ್ಮೀಯರು ಸಹಕಾರ ನೀಡಲಿದ್ದಾರೆ ಮತ್ತು ನಿಮ್ಮ ಕುಶಲತೆ ತಂತ್ರಗಾರಿಕೆಯೂ ನಷ್ಟವಾಗದಂತೆ ತಡೆಗಟ್ಟಲಿದೆ. ಹಿರಿಯರ ಮಾತಿಗೆ ಬೆಲೆ ನೀಡುವುದು ಒಳ್ಳೆಯದು. ನಿಮ್ಮ ಗ್ರಾಹಕರ ಬದ್ಧತೆಯನ್ನು ಕಾಪಾಡಿಕೊಳ್ಳಿ. ವ್ಯಾಪಾರದಲ್ಲಿ ಬರುವ ಸ್ಪರ್ಧೆಗಳಿಗೆ ನೀವು ತಯಾರಿ ನಡೆಸುವುದು ಕ್ಷೇಮ. ಸಂಗಾತಿಯ ಕುಟುಂಬದಿಂದ ಅನುಕೂಲಕರ ವಾತಾವರಣ ಮೂಡಲಿದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕೌಟುಂಬಿಕ ಸಮಸ್ಯೆಗಳನ್ನು ಇಂದು ನೀವು ಇತ್ಯರ್ಥ ಪಡಿಸಲು ವಿಶೇಷ ಕಾಳಜಿ ವಹಿಸುತ್ತೀರಿ. ಕೆಲವರು ಸಮಸ್ಯೆಗಳನ್ನು ತೆಗೆದುಕೊಂಡು ಪರಿಹಾರಕ್ಕಾಗಿ ನಿಮ್ಮ ಬಳಿ ಬರುವ ಸಾಧ್ಯತೆ ಇದೆ. ಗಣ್ಯ ವ್ಯಕ್ತಿಗಳ ಬೇಟಿ ಮಾಡುವಿರಿ. ಮುಂದಿನ ದಿನಗಳಲ್ಲಿ ನಿಮ್ಮ ಕಾರ್ಯಕ್ರಮಗಳಿಗೆ ಇಂದೇ ರೂಪರೇಷೆ ಮಾಡಿಕೊಳ್ಳುವ ಚಿಂತನೆ ನಿಮ್ಮದು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಗೃಹ ಅಲಂಕಾರಕ್ಕೆ ವಿಶೇಷ ಗಮನ ಹರಿಸುತ್ತೀರಿ. ಪತ್ನಿಯ ಜೊತೆಗೆ ವಸ್ತುಗಳ ಖರೀದಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತೀರಿ. ಬಂದು ವರ್ಗದೊಡನೆ ಆಸ್ತಿ ಹಣಕಾಸಿಗಾಗಿ ವ್ಯಾಜ್ಯಗಳು ಸೃಷ್ಟಿಯಾಗಬಹುದು. ವೈಯಕ್ತಿಕ ಸಮಸ್ಯೆಗಳನ್ನು ಕೆಲಸ ಕಾರ್ಯದಲ್ಲಿ ತರಬೇಡಿ. ಸಕಾರಾತ್ಮಕವಾಗಿ ಚಿಂತಿಸುವುದರಿಂದ ಎಲ್ಲವೂ ಸರಿ ಹೋಗುತ್ತದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಹಣಕಾಸು, ಸಾಲಬಾದೆ, ಪ್ರೇಮ ವಿಚಾರ, ದಾಂಪತ್ಯ, ಶತ್ರುಬಾಧೆ, ಕೌಟುಂಬಿಕ ಸಮಸ್ಯೆ ಇನ್ನೂ ಹತ್ತು ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English