ನಾಲ್ವರು ಸಂಭಂದಿಕರನ್ನು ನೇಣು ಹಾಕಿ ಹತ್ಯೆಗೈದ ವ್ಯಕ್ತಿ

11:53 PM, Monday, August 3rd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Udayaಮಂಜೇಶ್ವರ : ವ್ಯಕ್ತಿಯೊಬ್ಬ ತನ್ನ ನಾಲ್ವರು ಸಂಭಂದಿಕರನ್ನು ನೇಣು ಹಾಕಿ ಹತ್ಯೆಗೈದ ಭೀಕರ ಘಟನೆ ಮಂಜೇಶ್ವರ ಸಮೀಪದ ಬಾಯಾರು ಸುದೆಂಬಳ ಗುರುಕುಮೇರಿ ಎಂಬಲ್ಲಿ ಆಗಸ್ಟ್ 3 ರ ಸೋಮವಾರ ಸಂಜೆ 7 ಗಂಟೆಗೆ  ನಡೆದಿದೆ.

ಉದಯ ಎಂಬಾತ ತನ್ನ ಸಂಭಂದಿಕರಾದ ಸದಾಶಿವ (54), ವಿಠ್ಠಲ (52), ಬಾಬು (50) ಮತ್ತು ದೇವಕಿ (58) ನೇಣು ಹಾಕಿ ಹತ್ಯೆಗೈದ ಆರೋಪಿಯಾಗಿದ್ದಾನೆ.

ಕೌಟುಂಬಿಕ ಕಲಹವನ್ನು ಅನುಸರಿಸಿ ಈ ಘಟನೆ ನಡೆದಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕಾಸರಗೋಡು  ಡಿಎಸ್‌ಪಿ ಬಾಲಕೃಷ್ಣನ್ ನೇತೃತ್ವದ ಪೊಲೀಸ್ ತಂಡ ಈ ಬಗ್ಗೆ ತನಿಖೆ ನಡೆಸುತ್ತಿದೆ. ಆತ ಮಾನಸಿಕ ಅಸ್ವಸ್ಥ ನೆಂದು ಹೇಳಲಾಗುತ್ತಿದೆ.

ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಉದಯ ತನ್ನ ಮೂವರು ಚಿಕ್ಕಪ್ಪ ಮತ್ತು ಚಿಕ್ಕಮ್ಮ ನೊಂದಿಗೆ ಅವರ ಮನೆಯಲ್ಲಿ ವಾಸವಾಗಿದ್ದ, ಆಗಸ್ಟ್ 3 ರ ಸೋಮವಾರ ಸಂಜೆ 7 ಗಂಟೆ ಆತ ಈ ಕೃತ್ಯ ಎಸಗಿದ್ದಾನೆ.

ಮೃತರ ಶವಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English