ದಕ್ಷಿಣ ಕನ್ನಡ ಜಿಲ್ಲೆಯ ರಸ್ತೆಗಳನ್ನುತೆರೆದರು, ಕೇರಳ ಪೊಲೀಸರು ಮಾತ್ರ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಪಡಿಸುತ್ತಿದ್ದಾರೆ

11:28 PM, Wednesday, August 12th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

kerala border ಕಾಸರಗೋಡು : ಕೇರಳ-ಕರ್ನಾಟಕ ಗಡಿ ರಸ್ತೆ ಮುಚ್ಚಿರುವುದು  ಕೇಂದ್ರ ಸರಕಾರದ ಮಾರ್ಗ ಸೂಚಿಯ  ವಿರುದ್ಧವಾಗಿದೆ  ಹಾಕಲಾಗಿರುವ ಮಣ್ಣನ್ನು ತೆರವು ಗೊಳಿಸದಿದ್ದಲ್ಲಿ ಸ್ವಾತಂತ್ರ್ಯ ದಿನದಂದು ಮಣ್ಣು ತೆರವುಗೊಳಿಸುವ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದು ಬಿಜೆಪಿ ಯುವಮೋರ್ಚಾ ಕಾಸರಗೋಡು ಜಿಲ್ಲಾ ಘಟಕ ಮುನ್ನೆಚ್ಚರಿಕೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಆದೇಶದಂತೆ ಕರ್ನಾಟಕ ಗಡಿ ತೆರೆಯಲಾಗಿದೆ‌. ಆದರೂ ಕೇರಳ ಪೊಲೀಸರು ಆ ಮಾರ್ಗವಾಗಿ ಸಂಚರಿಸಲು ಬಿಡುತ್ತಿಲ್ಲ.  ಅಂತಾರಾಜ್ಯ ಪಾಸ್ ನೀಡಲು ಅವೈಜ್ಞಾನಿಕ ನಿಬಂಧನೆಗಳನ್ನು ಜಾರಿಗೊಳಿಸಲಾಗಿದೆ. ಇದು ಅಂಗೀಕರಿಸಲು ಸಾಧ್ಯ ಇಲ್ಲ. ನೂರಾರು ಮಂದಿಗೆ ಸಮಸ್ಯೆ ಉಂಟಾಗಿದ್ದು, ಕೂಡಲೇ ಇದನ್ನು ಪರಿಹರಿಸಬೇಕು ಎಂದು ಯುವ ಮೋರ್ಚಾ ಜಿಲ್ಲಾ ಸಮಿತಿ ಸಭೆ ಅಭಿಪ್ರಾಯ ಪಟ್ಟಿದೆ.

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English