ನ್ಯಾಯವಾದಿ, ಮುಂಬಯಿ ಪತ್ರಕರ್ತ ಸುರೇಶ್ ಆಚಾರ್ಯ ಪಿಲಾರು ನಿಧನ

8:45 PM, Saturday, September 26th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

suresh Acharyaಮುಂಬಯಿ : ಬೃಹನ್ಮುಂಬಯಿಯ ಕನ್ನಡ ಪತ್ರಿಕೋದ್ಯಮದಲ್ಲಿ ಸೇವೆಗೈದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಸಂಘದ 2012-2015ನೇ ಸಾಲಿನಲ್ಲಿ ಜೊತೆ ಕೋಶಾಧಿಕಾರಿ ಆಗಿದ್ದ ಸುರೇಶ್ ಆಚಾರ್ಯ (49) ಇಂದಿಲ್ಲಿ ತೀವ್ರ ಹೃದಯಾಘಾತದಿಂದ ನೆರೂಲ್ ಪಶ್ಚಿಮದಲ್ಲಿನ ಮಾನಕ್ ಆಸ್ಪತ್ರೆಯಲ್ಲಿ ವಿಧಿವಶರಾದರು.

ಉದಯವಾಣಿ ಕನ್ನಡ ದೈನಿಕದ ಮುಂಬಯಿ ಆವೃತ್ತಿಯಲ್ಲಿ ಉಪ ಸಂಪಾದಕರಾಗಿ ಸೇವೆ ಸಲ್ಲಿಸಿ ಸದ್ಯ ವಕೀಲ ವೃತ್ತಿಯಲ್ಲಿ ತೊಡಗಿಸಿದ್ದ ಇವರು ಉಡುಪಿ ಜಿಲ್ಲೆಯ ಕಾರ್ಕಳ ಪಿಲಾರು ಮೂಲದವರಾಗಿದ್ದು ಪ್ರಸ್ತುತ ನವಿ ಮುಂಬಯಿ ನೆರೂಲ್ ಸೆಕ್ಟರ್ ೧೦ರ ಗಾಂವ್‌ದೇವಿ ಇಲ್ಲಿನ ಪ್ರಸಾದ್ ಬಿಲ್ಡಿಂಗ್‌ನಲ್ಲಿ ವಾಸವಾಗಿದ್ದರು.

ಮೃತರು ಪತ್ನಿ ಮತ್ತು ಬಂಧು ಬಳಗವನ್ನು ಅಗಲಿದ್ದಾರೆ. ಸುರೇಶ್ ಆಚಾರ್ಯ ನಿಧನಕ್ಕೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ, ಪದಾಧಿಕಾರಿಗಳು ಮತ್ತು ಸದಸ್ಯರು ತೀವ್ರ ಸಂತಾಪ ವ್ಯಕ್ತ ಪಡಿಸಿ ಬಾಷ್ಪಾಂಜಲಿ ಕೋರಿದ್ದಾರೆ.

ಸಂತಾಪ 
ನಾವಿಬ್ಬರೂ 4 ವರ್ಷಗಳ ಕಾಲ  ಅಂಧೇರಿ ನ್ಯಾಯಾಲಯದಲ್ಲಿ ಒಟ್ಟಿಗೆ ಅಭ್ಯಾಸ ಮಾಡುತ್ತಿದ್ದೇವೆ. ಅವರು  ಸರಳ ಮತ್ತು ಕಠಿಣ ಪರಿಶ್ರಮದಿಂದ ಕೆಲಸ ಮಾಡುವ ಕನ್ನಡಿಗರು. ನಾವು ಒಳ್ಳೆಯ ಸ್ನೇಹಿತನನ್ನು ಮತ್ತು ಭವಿಷ್ಯದ ಶ್ರೇಷ್ಠ ವಕೀಲರನ್ನು ಕಳೆದುಕೊಂಡೆವು. ಅವರ ಆತ್ಮವು ಸ್ವರ್ಗೀಯ ವಾಸಸ್ಥಾನದಲ್ಲಿ ಶಾಶ್ವತ ಶಾಂತಿಯಿಂದ ವಿಶ್ರಾಂತಿ ಪಡೆಯಲಿ ಮತ್ತು ಮೋಕ್ಷವನ್ನು ಪಡೆಯಲಿ.   ಮೋರ್ಲ ರತ್ನಾಕರ ಶೆಟ್ಟಿ, ಹಿರಿಯ  ವಕೀಲರು ಮುಂಬೈ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English