ದುಷ್ಟಶಕ್ತಿ ಪೀಡನೆಗಳಿಂದ ಹೊರಬರಲು ಕೆಲವು ತಂತ್ರಗಳು

7:00 AM, Monday, October 12th, 2020
Share
1 Star2 Stars3 Stars4 Stars5 Stars
(No Ratings Yet)
Loading...

Kalaratri ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ಸೂರ್ಯನ ಕಡು ಬಿಸಿಲಿನಿಂದ ತಂಪನ್ನು ನಿರೀಕ್ಷಿಸಲು ಸಾಧ್ಯವಿಲ್ಲ, ಒರಟು ಮೇಲ್ಮೈಗಳಿಂದ ಮೃದುತ್ವವನ್ನು ನಿರೀಕ್ಷಿಸಲು ಸಾಧ್ಯವಿಲ್ಲ, ಕೆಟ್ಟ ಆಲೋಚನೆ ಹೊಂದಿರುವ ವ್ಯಕ್ತಿಗಳಿಂದ ಕರುಣೆ, ದಯೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗೆಯೇ ದುಷ್ಟಶಕ್ತಿಗಳು, ಕೆಟ್ಟಶಕ್ತಿಗಳು, ನಕಾರಾತ್ಮಕ ಶಕ್ತಿಗಳಿಂದ ಒಳಿತನ್ನು ಪಡೆಯಲು ಸಾಧ್ಯವಿಲ್ಲ.

ಕೆಟ್ಟ ವಿಚಾರಗಳು ನೀವು ಎಷ್ಟೇ ತೃಪ್ತಿಪಡಿಸಿದರು ಸಹ ಅವುಗಳು ತೃಪ್ತ ವಾಗುವುದಿಲ್ಲ, ನೀವು ನಿಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಲು ಇನ್ನೊಬ್ಬರಿಗೆ ಕೆಡುಕು ಮಾಡಲು ಹಾಗೆಯೇ ಕ್ಷಣಿಕ ಸಂತೋಷಕ್ಕಾಗಿ ಕ್ಷುದ್ರಪೂಜೆ, ಮಾಟ ಮಂತ್ರದಂತಹ ವಿಚಾರಗಳಿಗೆ ಕೈ ಹಾಕುವುದರಿಂದ ಮುಂದೊಂದು ದಿನ ಅದು ನಿಮಗೆ ಸಮಸ್ಯೆ ತಂದುಕೊಡುವುದು ನಿಶ್ಚಿತ.

ನಿಮ್ಮ ಮನೋ ಬಯಕೆಗಳು ಕನಸುಗಳು ನಿಮ್ಮಲ್ಲಿ ಭಯ ಹುಟ್ಟಿಸುತ್ತದೆ, ನಿಮ್ಮ ಸಂಬಂಧಗಳನ್ನು ದೂರಮಾಡುತ್ತದೆ, ದೀರ್ಘಾವಧಿಯ ಅನಾರೋಗ್ಯದಂತಹ ಪರಿಸ್ಥಿತಿಯಲ್ಲಿ ಸಿಲುಕುವಿರಿ. ಕ್ಷಣಿಕ ಆಸೆ-ಆಕಾಂಕ್ಷೆಗಳಿಗಾಗಿ ಮಾಟ ಮಂತ್ರದಂತಹ ವಿಚಾರಗಳಿಗೆ ಮೊರೆಹೋಗಿ ನಿಮ್ಮ ಜೀವನ ಮತ್ತು ನಿಮ್ಮ ತಲೆಮಾರುಗಳಿಗೆ ನಷ್ಟ ಮಾಡುವಿರಿ.

ನಮ್ಮ ನಿಜವಾದ ಯಶಸ್ಸು ಒಳ್ಳೆಯ ಆಲೋಚನೆ, ಸಕಾರಾತ್ಮಕ ದೃಷ್ಟಿಕೋನ, ದೈವ ದೇವರು ಪೂಜಾಕೈಂಕರ್ಯಗಳು, ಹೋಮ-ಹವನಗಳು, ಮನಸ್ಸಿನಲ್ಲಿ ಮೂಡುವ ಪ್ರೀತಿ ಇವು ಯಶಸ್ಸು ಮತ್ತು ಸಂಪತ್ತನ್ನು ದಯಪಾಲಿಸುತ್ತದೆ.

ನಾವು ದಿಡೀರನೆ ಶ್ರೀಮಂತರಾಗಲು ಬಯಸುತ್ತೇವೆ ಇದಕ್ಕಾಗಿ ಹಲವಾರು ತಂತ್ರಗಳ ವಿಚಾರಗಳಿಗೆ ಮೊರೆ ಹೋಗುವುದು ಸಾಮಾನ್ಯ, ಆದರೆ ಮಾನಸಿಕವಾಗಿ ಶ್ರೀಮಂತನಾಗಲು ಮತ್ತು ನೆಮ್ಮದಿಯುತ ಜೀವನ ಸಾಗಿಸಲು ಯಾವುದೇ ಅಡ್ಡದಾರಿಗಳು ಪ್ರಯೋಜನ ನೀಡುವುದಿಲ್ಲ.

ಜೂಜಾಟ ಗಳಲ್ಲಿ ಪಾಲ್ಗೊಳ್ಳುತ್ತಾರೆ ಏಕೆಂದರೆ ದಿಡೀರನೆ ಶ್ರೀಮಂತರಾಗಬಹುದು ಆದರೆ ಕಳೆದುಕೊಂಡು ನಷ್ಟದಲ್ಲಿ ಇರುವ ಜನಗಳು ಹೆಚ್ಚು. ನಿರಂತರ ಪರಿಶ್ರಮ ಹಾಗೂ ನಮ್ಮ ಸಕಾರಾತ್ಮಕ ದೃಷ್ಟಿಕೋನ ಇದು ನಮ್ಮ ಶಕ್ತಿಯಲ್ಲಿ ಅಡಕವಾಗಿರುವುದು, ನಮ್ಮ ಗೆಲುವು ನಮ್ಮ ಹಿಂದೆ, ಮುಂದೆ, ಪಕ್ಕದಲ್ಲಿ ಯಾವಾಗಲೂ ಇರುತ್ತದೆ ಆದರೆ ಅದನ್ನು ಗಮನಿಸದೆ ಜೀವನ ಸಾಗಿಸುತ್ತೇವೆ. ಜೀವನದಲ್ಲಿ ಬೆಳವಣಿಗೆ ಸಾಧಿಸಲು ಪ್ರಯತ್ನಪಡಬೇಕು ಅಭಿವೃದ್ಧಿಯತ್ತ ಗಮನ ವಹಿಸಬೇಕು ನಿರಂತರ ಪರಿಶ್ರಮ, ತಾಳ್ಮೆ ಯಾವಾಗಲೂ ನಮ್ಮಲ್ಲಿರಬೇಕು.

ಮಂತ್ರಗಳ ಅಭ್ಯಾಸ, ಗೆಲುವಿಗೆ ಬೇಕಾದ ಸೌಕರ್ಯ, ಸುಸ್ಥಿರ ಆರೋಗ್ಯ, ಉತ್ತಮ ಸಂಬಂಧಗಳು, ಆಕರ್ಷಕ ವ್ಯಕ್ತಿತ್ವ ಇವುಗಳನ್ನು ಸಂಪಾದಿಸಬೇಕು. ಕೆಲವು ತಂತ್ರಗಳು, ದುಷ್ಟಶಕ್ತಿ ಪೀಡನೆಗಳಿಂದ ಹೊರಬರಲು ಮಾತ್ರ ನಾವು ಉಪಯೋಗಿಸಿ ಕೊಳ್ಳಬೇಕಾಗುತ್ತದೆ. ಹಾಗೆಯೇ ನಮ್ಮ ವಿರುದ್ಧ ನಡೆಯುವ ಅಸಂಬದ್ಧ ಆಘಾತ ನೀಡುವ ತಂತ್ರ ಕ್ರಿಯೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮಾತ್ರ ಇದನ್ನು ಬಳಸಿಕೊಳ್ಳುವುದು ಸೂಕ್ತ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English