ದಿನ ಭವಿಷ್ಯ : ನಿಮ್ಮ ಪರೋಪಕಾರದ ಗುಣ ಧರ್ಮವು ಮೆಚ್ಚುಗೆ ಗಳಿಸುತ್ತದೆ

6:00 AM, Wednesday, December 16th, 2020
Share
1 Star2 Stars3 Stars4 Stars5 Stars
(No Ratings Yet)
Loading...

subrahmanya ಶ್ರೀ ಸುಬ್ರಹ್ಮಣ್ಯ ಸ್ವಾಮಿ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150

ಮೇಷ ರಾಶಿ
ಅನಗತ್ಯ ಪ್ರಯಾಣದಿಂದ ದೇಹಾರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಆಹಾರ ಸೇವನೆಯ ಬಗ್ಗೆ ವಿಶೇಷ ಕಾಳಜಿವಹಿಸಿ. ಕುಟುಂಬದಲ್ಲಿ ಖರ್ಚುಗಳ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ. ಗೃಹ ಕಾಮಗಾರಿಗಳು ಕುಂಟುತ್ತಾ ವೃತ್ತ ತೆವಳುತ್ತಾ ಸಾಗುತ್ತದೆ. ಕುಲದೇವತಾರಾಧನೆ ಮಾಡುವುದು ಒಳಿತು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಿಮ್ಮ ಅನುಭವ ಹಾಗೂ ಕೆಲಸದ ಪರಿಣತಿ ತುಂಬಾ ಉಪಯುಕ್ತವಾಗಲಿದೆ, ಇದರಿಂದ ಯೋಜಿತ ಕಾರ್ಯಗಳನ್ನು ಸರಾಗವಾಗಿ ಮಾಡುತ್ತೀರಿ. ಮೇಲಾಧಿಕಾರಿಗಳಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಲಿದೆ. ಉದ್ಯೋಗದಲ್ಲಿ ಸ್ಥಳ ಬದಲಾವಣೆಯ ನಿರೀಕ್ಷೆ ಕಾಣಬಹುದಾಗಿದೆ. ಈ ದಿನ ಕಠಿಣ ಕೆಲಸಗಳಿಂದ ಹೆಚ್ಚಿನ ಆಯಾಸ ಆಗಲಿದೆ. ನಿಮ್ಮ ಪರೋಪಕಾರದ ಗುಣ ಧರ್ಮವು ಮೆಚ್ಚುಗೆ ಗಳಿಸುತ್ತದೆ. ಕೆಲವರಿಗೆ ನಿಮ್ಮ ಬುದ್ಧಿ ಮಾತುಗಳು ಸಹಿಸಲು ಅಸಾಧ್ಯ ವಾಗಬಹುದು ಆದಕಾರಣ ನಿಮ್ಮ ಮಾತುಕತೆಗಳನ್ನು ಯೋಗ್ಯರೊಡನೆ ಇಟ್ಟುಕೊಳ್ಳುವುದು ಕ್ಷೇಮದಾಯಕ ವಾಗಿರುತ್ತದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಆಕಸ್ಮಿಕವಾಗಿ ಬಾಲ್ಯ ಸ್ನೇಹಿತರ ಭೇಟಿಯಾಗುವ ಸಾಧ್ಯತೆ ಈ ದಿನ ಕಂಡುಬರುತ್ತದೆ. ಆಶಾವಾದಿಗಳಾಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಿ. ಉಜ್ವಲ ಭವಿಷ್ಯದ ಬಗ್ಗೆ ಯೋಚಿಸಿ, ಆತ್ಮವಿಶ್ವಾಸ ಭರಿತ ವಿಚಾರಗಳು ಮತ್ತು ಭರವಸೆಯ ಸಂಕಲ್ಪಗಳು ನಿಮ್ಮ ಇಷ್ಟಾರ್ಥಗಳನ್ನು ಸಾಕಾರಗೊಳಿಸಲು ಸಹಾಯ ನೀಡುತ್ತದೆ. ಈ ದಿನ ನಿಮ್ಮ ವರ್ಚಸ್ಸನ್ನು ವೃದ್ಧಿಸಿಕೊಳ್ಳಲು ಹೆಚ್ಚಿನ ಖರ್ಚುಗಳನ್ನು ಮಾಡಲಿದ್ದೀರಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಮನೆಯ ಅಲಂಕಾರಕ್ಕೆ ಪ್ರಶಸ್ತ ನೀಡಲಿದ್ದೀರಿ. ಮಕ್ಕಳ ಭವಿಷ್ಯದ ಬಗ್ಗೆ ಉತ್ತಮ ತರಬೇತಿ ನೀಡಲಿದ್ದೀರಿ. ಮಕ್ಕಳ ನಗುವಿನಲ್ಲಿ ಮನೆಯು ನಂದನವನವಾಗುತ್ತದೆ. ನಿಮ್ಮ ಏಕಾಂಗಿತನದ ಸ್ವಭಾವವನ್ನು ತೆಗೆದಿಟ್ಟು ಆದಷ್ಟು ಜನರೊಂದಿಗೆ ಬೆರೆಯುವುದನ್ನು ರೂಢಿಸಿಕೊಳ್ಳಿ. ಸಹೋದ್ಯೋಗಿಗಳು ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ಕೆಲವು ವಿಷಯಗಳಲ್ಲಿ ನಿಮ್ಮ ದುಡುಕಿನ ನಿರ್ಧಾರ ಹೆಚ್ಚಿನ ನಷ್ಟ ತರಬಹುದು. ಆಧ್ಯಾತ್ಮದ ವಿಚಾರಧಾರೆಗಳು ನಿಮ್ಮಲ್ಲಿ ಕಂಡುಬರಲಿದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡು ಸಂತೋಷಪಡುವ ಮನಸ್ಥಿತಿಯಲ್ಲಿ ಇರುವಿರಿ. ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಹಿನ್ನಡೆ ಕಂಡುಬರಲಿದೆ. ನಿಮ್ಮ ಮನಸ್ಸಿಗೆ ಮುದ ನೀಡುವ ಕಾರ್ಯಗಳಲ್ಲಿ ಪಾಲ್ಗೊಳ್ಳಿ, ಇನ್ನೊಬ್ಬರನ್ನು ಮೆಚ್ಚಿಸುವ ಸಲುವಾಗಿ ಕಾರ್ಯ ಮಾಡುವುದು ತಪ್ಪು. ತಪ್ಪಾದ ಅಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಲು ಮುಂದಾಗಿ. ಜಂಟಿ ವ್ಯವಹಾರಗಳಲ್ಲಿ ಸಮಸ್ಯೆ ಹೆಚ್ಚಾಗಲಿದೆ ಹಾಗೂ ನಷ್ಟತೆ ಆವರಿಸಬಹುದು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಸ್ನೇಹಿತರು ಈ ದಿನ ನಿಮಗೆ ಮನರಂಜನಾ ಚಟುವಟಿಕೆಗಳಿಗೆ ಆಮಂತ್ರಣ ನೀಡಲಿದ್ದಾರೆ. ಆರೋಗ್ಯಯುತ ಜೀವನ ಶೈಲಿಯನ್ನು ನಡೆಸಲು ಮುಂದಾಗುವುದು ಒಳ್ಳೆಯದು. ದೈಹಿಕ ಆಯಾಸ ಹೆಚ್ಚಾಗುವ ಸಾಧ್ಯತೆ ಕಾಣಬಹುದು. ನವೀನ ಕಾರ್ಯಗಳಿಗೆ ಉತ್ತಮ ಮಟ್ಟದ ಸಹಕಾರ ದೊರೆಯಲಿದೆ. ನಿಮ್ಮಲ್ಲಿನ ಕೆಲಸದ ಬದ್ಧತೆ ಉತ್ತಮ ಲಾಭ ತಂದುಕೊಡಲಿದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಸಂಗಾತಿಯೊಡನೆ ಮನಸ್ತಾಪ ಆಗಬಹುದು ಆದಷ್ಟು ಸರಿಮಾಡಿಕೊಳ್ಳಿ. ವೃತ್ತಿಯಲ್ಲಿ ಕೆಲವು ವೈಯಕ್ತಿಕ ಸಂಗತಿಗಳು ಹೆಚ್ಚಿನ ತೊಂದರೆ ನೀಡಲಿದೆ. ಯೋಜನೆಗಳಲ್ಲಿ ಮತ್ತು ಹೂಡಿಕೆಗಳಲ್ಲಿ ಜಾಗ್ರತೆ ಅವಶ್ಯಕವಾಗಿದೆ. ಸುಖಾಸುಮ್ಮನೆ ವಾಗ್ದಾನಗಳನ್ನು ನೀಡಿ ಸಿಲುಕಬೇಡಿ ಇದು ನಿಮ್ಮ ವ್ಯಕ್ತಿತ್ವಕ್ಕೆ ಸಮಸ್ಯೆ ನೀಡಬಹುದು. ಕೆಲವು ಸಮಸ್ಯೆಗಳಲ್ಲಿ ನೀವು ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಳ್ಳುವುದು ಬೇಡ, ಇದು ನಿಮ್ಮ ಹೆಸರಿಗೆ ಕಪ್ಪು ಚುಕ್ಕೆ ಆಗಬಹುದು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ನಿಮ್ಮ ಸ್ವಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಿರುವ ಕೆಲಸವು ಹಿನ್ನಡೆಯಾಗುವ ಸಾಧ್ಯತೆ ಕಂಡುಬರುತ್ತದೆ. ಹಣಕಾಸಿನ ಸಮಸ್ಯೆಯು ಆಕಸ್ಮಿಕವಾಗಿ ಭುಗಿಲೇಳುವ ಸಾಧ್ಯತೆಗಳು ಕಂಡು ಬರುತ್ತದೆ. ಹೂಡಿಕೆಗಳು ಸ್ವಲ್ಪ ಪ್ರಮಾಣದ ಹಿನ್ನಡೆಯಿಂದ ನಿಮ್ಮ ಆರ್ಥಿಕ ವ್ಯವಸ್ಥೆ ಹದಗೆಡಿಸಬಹುದು. ಕುಟುಂಬದ ಬೆಂಬಲವೂ ನಿಮಗೆ ಸಿಗಲಿದ್ದು ಹಿರಿಯರು ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ಸ್ನೇಹಿತ ವರ್ಗದೊಡನೆ ಅನಗತ್ಯವಾಗಿ ವೈಮನಸ್ಸು ಸೃಷ್ಟಿಯಾಗಬಹುದು. ನಿಮ್ಮ ಕೆಲವು ಮಾತುಗಳು ಹರಿತವಾಗಿದ್ದು ಎದುರುಗಡೆ ಇರುವ ವ್ಯಕ್ತಿಗಳನ್ನು ನೋಯಿಸುವಂತೆ ಮಾಡುತ್ತದೆ ಆದಷ್ಟು ಎಚ್ಚರದಿಂದ ಮಾತುಗಳನ್ನಾಡಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಈ ದಿನ ಮಡದಿ ಮತ್ತು ಮಕ್ಕಳು ನಿಮಗೆ ಹೊಸ ಬಗೆಯ ಆಲೋಚನೆಯನ್ನು ತಿಳಿಸಿ ಕೊಡಬಹುದಾಗಿದೆ. ಬಂದಿರುವ ಅವಕಾಶಗಳನ್ನು ಲಘುವಾಗಿ ಪರಿಗಣಿಸಬೇಡಿ ಆದಷ್ಟು ವಿವೇಚನೆಯಿಂದ ಕಾರ್ಯ ಪ್ರವೃತ್ತರಾಗುವುದು ಒಳಿತು. ಮಾನಸಿಕ ಖಿನ್ನತೆ ಆವರಿಸಬಹುದು ಬರುವ ಒತ್ತಡಗಳನ್ನು ಎದುರಿಸಿ ಸಮತೋಲನ ಕಾಪಾಡಿಕೊಳ್ಳಿ. ಆರ್ಥಿಕ ಉಳಿತಾಯಕ್ಕೆ ಆದಷ್ಟು ಆದ್ಯತೆ ನೀಡುವುದು ಒಳಿತು. ಅತಿಯಾದ ದುಂದುವೆಚ್ಚ ದಿಂದ ಮಾರಕವಾಗಬಹುದು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ದಾಖಲೆಗಳ ಬಗ್ಗೆ ನಿರ್ಲಕ್ಷ ಬೇಡ. ಪತಿ-ಪತ್ನಿಯರು ಒಬ್ಬರನ್ನೊಬ್ಬರು ಅರಿತು ಬಾಳುವುದು ಜೀವನ ಸುಖಾಸುಮ್ಮನೆ ಕದನ ಕಲಹ ದಂತಹ ವಿಚಾರಕ್ಕೆ ಕೈಹಾಕಬೇಡಿ. ನಿಮ್ಮ ಕೌಟುಂಬಿಕ ವಿಷಯಗಳನ್ನು ಗೌಪ್ಯತೆ ಯಿಂದ ಕಾಪಾಡಿಕೊಳ್ಳಿ. ಸಾರ್ವಜನಿಕ ಜೀವನದಲ್ಲಿ ಕೆಲವು ಅಪಹಾಸ್ಯ ಅಥವಾ ನಿಮ್ಮ ವರ್ಚಸ್ಸಿಗೆ ಧಕ್ಕೆಯಾಗುವ ಪ್ರಸಂಗಗಳು ನಡೆಯಬಹುದು ಎಚ್ಚರವಿರಲಿ. ಪ್ರೀತಿಪಾತ್ರರು ನಿಮ್ಮ ಬರುವಿಕೆಯನ್ನು ಕಾಯುತ್ತಿರುತ್ತಾರೆ ಮತ್ತು ನಿಮ್ಮ ಉಪಸ್ಥಿತಿಯಿಂದ ಅವರಲ್ಲಿ ಪ್ರೌಡಿಮೆ ಗೌರವ ಹೆಚ್ಚಲಿದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಗಣ್ಯ ವ್ಯಕ್ತಿಗಳ ಜೊತೆಗೆ ಮಾತನಾಡುವಾಗ ಆದಷ್ಟು ತಾಳ್ಮೆ ಇರಲಿ ಹಾಗೂ ಮಾತುಗಳನ್ನು ಕೇಳುವ ಮನಸ್ಥಿತಿ ಅವಶ್ಯಕ. ಉದ್ಯೋಗದ ನಿಮಿತ್ತ ಅನಿರೀಕ್ಷಿತ ಪ್ರಯಾಣ ಎದುರಾಗಲಿದೆ ಇದು ನಿಮ್ಮ ಒತ್ತಡ ಹೆಚ್ಚು ಮಾಡಬಹುದು. ಇಂದು ಪ್ರೇಮಾಂಕುರವಾಗುವ ಲಕ್ಷಣಗಳು ಗೋಚರವಾಗಲಿದೆ. ನಿಮ್ಮ ಕಾರ್ಯಕಲಾಪಗಳಲ್ಲಿ ಹಿರಿಯರಿಂದ ಅಪಶ್ರುತಿ ಕೇಳುವ ಸಾಧ್ಯತೆ ಕಂಡುಬರುತ್ತದೆ. ಈ ದಿನ ಏಕಾಗ್ರತೆಗೆ ಭಂಗತರುವ ಪ್ರಸಂಗಗಳು ನಡೆಯಬಹುದು ಎಚ್ಚರವಿರಲಿ. ಪಾವತಿ ಗಳಲ್ಲಿ ವಿಳಂಬದ ಧೋರಣೆ ಒಳ್ಳೆಯ ಕ್ರಮವಲ್ಲ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ಪಡಿಸಲು ಪ್ರಯತ್ನಿಸಿ. ಇಂದು ಅಪರೂಪಕ್ಕೆ ಸಿಗುವ ಅತಿಥಿಗಳಿಂದ ನಿಮ್ಮ ಸಂಜೆಯ ಕೂಟಗಳು ಬಲು ರಂಜನೆ ಇಂದ ನಡೆಯಲಿದೆ. ಧಾರ್ಮಿಕ ವಿಧಿ ವಿಧಾನಗಳಿಗೆ ಆದ್ಯತೆ ನೀಡುವ ಸಾಧ್ಯತೆ ಕಂಡುಬರುತ್ತದೆ. ಕೆಲಸದ ಹೆಚ್ಚಿನ ಒತ್ತಡಗಳಿಂದ ವಿಶ್ರಾಂತಿಗೆ ಸಮಯ ಸಿಗದಿರಬಹುದು. ಬಾಕಿ ಕೆಲಸಗಳನ್ನು ಪೂರ್ಣಪ್ರಮಾಣದಲ್ಲಿ ಮುಗಿಸುವ ಇರಾದೆ ಇರಲಿದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಹಣಕಾಸು, ಸಾಲಬಾದೆ, ಪ್ರೇಮ ವಿಚಾರ, ದಾಂಪತ್ಯ, ಶತ್ರುಬಾಧೆ, ಕೌಟುಂಬಿಕ ಸಮಸ್ಯೆ ಇನ್ನೂ ಹತ್ತು ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English