ವಿದ್ಯುತ್ ಕಂಬದಲ್ಲಿ ಇಂಟರ್ನೆಟ್ ಕೇಬಲ್ ಅಳವಡಿಸುವ ವೇಳೆ ವಿದ್ಯುತ್ ಸ್ಪರ್ಶ, ಸಾವು

8:14 PM, Sunday, December 27th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Padmanabhaಮಂಗಳೂರು: ಖಾಸಗಿ ಸಂಸ್ಥೆಯೊಂದರ  ಉದ್ಯೋಗಿ  ವಿದ್ಯುತ್ ಕಂಬದಲ್ಲಿ ಬಿಎಸ್ಎನ್ಎಲ್ ಇಂಟರ್ನೆಟ್ ಕೇಬಲ್ ಅಳವಡಿಸುವ ವೇಳೆ ವಿದ್ಯುತ್ ಸ್ಪರ್ಶದಿಂದ  ಓರ್ವ ವ್ಯಕ್ತಿ  ಮೃತಪಟ್ಟಿರುವ ದುರ್ಘಟನೆ ಪುತ್ತೂರು ಕೋರ್ಟ್ ರೋಡಿನ ಮಾರ್ಕೆಟ್ ಬಳಿ ನಡೆದಿದೆ.

ಅರ್ಲಪದವಿನ ಬೆಟ್ಟಂಪಾಡಿ ನಿವಾಸಿ ಪದ್ಮನಾಭ ಮೃತಪಟ್ಟ ದುರ್ದೈವಿ.

ಪುತ್ತೂರು ಮೀನು‌ ಮಾರುಕಟ್ಟೆಯ ಬಳಿ ಇಂಟರ್ನೆಟ್ ಕೇಬಲ್ ಅಳವಡಿಸುವ ಕಾರ್ಯ‌ ನಡೆಸಲಾಗುತ್ತಿತ್ತು. ಈ ವೇಳೆ ವಿದ್ಯುತ್ ಪ್ರವಹಿಸಿ ಬೆಟ್ಟಂಪಾಡಿ ನಿವಾಸಿ  ಪದ್ಮನಾಭ ಮೃತಪಟ್ಟಿದ್ದಾರೆ.

ಅವರು  ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಸಕ್ರಿಯ ಕಾರ್ಯಕರ್ತರಾಗಿದ್ದರು.

ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English