ಕೈರಂಗಳದಲ್ಲಿ ಸೊಸೆಯ ಮೇಲೆಯೇ ಅತ್ಯಾಚಾರ ನಡೆಸಿದ ಮಾವ

1:52 PM, Saturday, January 2nd, 2021
Share
1 Star2 Stars3 Stars4 Stars5 Stars
(6 rating, 2 votes)
Loading...

Lakshmi Narayana ವಿಟ್ಲ : ಮುಡಿಪು ಸಮೀಪದ ಕೈರಂಗಳ ನಿವಾಸಿ ಹವ್ಯಕ ವಲಯದ ಗುರಿಕ್ಕಾರನೊಬ್ಬ ತನ್ನ ಮಗನ ಹೆಂಡತಿ(ಸೊಸೆ)ಯ ಮೇಲೆಯೇ ಅತ್ಯಾಚಾರ ನಡೆಸಿ ಜೀವಬೆದರಿಕೆ ಹಾಕಿರುವ ಆರೋಪದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ.

ಮೂಲತ: ವಿಟ್ಲ ಸಮೀಪದ ಕಾಂತಿಲ ನಿವಾಸಿಯಾಗಿದ್ದು ಇದೀಗ ಮುಡಿಪು ಸಮೀಪದ ಬಾಳೆಪುಣಿ ಗ್ರಾಮದ ಕೈರಂಗಳ ನಿವಾಸಿ ಹವ್ಯಕ ವಲಯದ ಗುರಿಕ್ಕಾರ ಲಕ್ಮಿನಾರಾಯಣ ಭಟ್ಟ(60)ಪ್ರಾಣಿಗಿಂತಲೂ ಕೀಳಾಗಿ ವರ್ತಿಸಿದ ವಿಕೃತ ಕಾಮುಕ. ಆರು ವರ್ಷಗಳ ಹಿಂದೆ ಈತನ ಪುತ್ರ ಎಸ್.ಜಿ.ಆರ್. ಅರ್ಥ್‌ಮೂವರ್‍ಸ್ ಮಾಲಿಕ ಶಿವರಂಜನ್ ವಿಟ್ಲ ವ್ಯಾಪ್ತಿಯ ವಿಟ್ಲಪಡ್ನೂರು ಗ್ರಾಮದ ಯುವತಿಯನ್ನು ವಿವಾಹವಾಗಿದ್ದ. 5ವರ್ಷದ ಪುತ್ರಿ ಹಾಗೂ ಎರಡು ವರ್ಷದ ಪುತ್ರನನ್ನು ಹೊಂದಿರುವ ಶಿವರಂಜನ್ ದಂಪತಿ ತಂದೆ ಲಕ್ಮಿನಾರಾಯಣ ಭಟ್ಟ ಮತ್ತು ತಾಯಿ ಗೀತಾ ಜೊತೆ ನೆಮ್ಮದಿಯ ಸಂಸಾರ ನಡೆಸುತ್ತಿದ್ದರು. ಪತಿ ಶಿವರಂಜನ್ ಅರ್ಥ್‌ಮೂವರ್‍ಸ್ ಸಂಸ್ಥೆಯನ್ನು ನಡೆಸುತ್ತಿದ್ದರೆ ಆತನ ಪತ್ನಿ ಇಬ್ಬರು ಎಳೆಯ ಮಕ್ಕಳ ಜೊತೆ ಅತ್ತೆ, ಮಾವನೊಂದಿಗೆ ಮನೆಯಲ್ಲಿದ್ದರು.

ವಿಕೃತ ಕಾಮಿ ಮಾವ,
ಪತಿ ಶಿರಂಜನ್ ಹಗಲು ಹೊತ್ತು ತನ್ನ ವ್ಯವಹಾರದಲ್ಲಿದ್ದರೆ ಪತ್ನಿ ಮನೆವಾರ್ತೆ ನೋಡುತ್ತಿದ್ದರು. ಕೆಲತಿಂಗಳಿಂದ ಸೊಸೆ ಮನೆ ಕೆಲಸ ಮಾಡುತ್ತಿದ್ದ ಸಂದರ್ಭ ಮಾವ ಲಕ್ಮಿನಾರಾಯಣ ಭಟ್ಟ ಆಕೆಯ ಮೈಮುಟ್ಟುತ್ತಾ ವಿಕೃತ ಚೇಷ್ಟೆ ತೋರಿಸುವುದಲ್ಲದೇ ತನ್ನೊಂದಿಗೆ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಪೀಡಿಸುತ್ತಿದ್ದನೆಂದು ಸಂತ್ರಸ್ತೆ ವಿವರಿಸಿದ್ದಾಳೆ. ಮಾವನ ಹುಚ್ಚಾಟದ ಬಗ್ಗೆ ಸೊಸೆ ತನ್ನ ಅತ್ತೆ ಗೀತಾಳಲ್ಲಿ ಕಣ್ಣೀರಿಟ್ಟು ಹೇಳಿದಾಗ “ಪರವಾಗಿಲ್ಲ. ಮಾವನೊಂದಿಗೆ ಬೇಕಾದಂತೆ ಸಹಕರಿಸು. ಅದರಲ್ಲೇನು ತಪ್ಪಿಲ್ಲವೆಂದು ಹೇಳುತ್ತಾ ಸಾಗ ಹಾಕುತ್ತಿದ್ದರು. ಇದರಿಂದ ನೊಂದ ಸೊಸೆ ತನ್ನ ಗಂಡನಲ್ಲಿ ಹೇಳಿದಾಗ ಆತ ಕೂಡಾ ಲಘುವಾಗಿ ತೆಗೆದುಕೊಂಡಿದ್ದನೆಂದು ಸಂತ್ರಸ್ತೆ ವಿವರಿಸಿದ್ದಾಳೆ.  7-12-2020 ರಂದು ಬಂದಿದ್ದ ಶಿವರಂಜನ್ ಸಹೋದರಿ ಮತ್ತು ಭಾವನ ಜೊತೆ ಅತ್ತೆ ಗೀತಾ ಮತ್ತು ಸಂತ್ರಸ್ತೆಯ 5ವರ್ಷದ ಪುತ್ರಿ ಬೆಂಗಳೂರಿಗೆ ತೆರಳಿದ್ದರು. 9-12-2020 ರಂದು ಪತಿ ಶಿವರಂಜನ್ ತನ್ನ ವ್ಯವಹಾರ ನಿಮಿತ್ತ ಹೊರಗಡೆ ಹೋಗಿದ್ದ ಸಂದರ್ಭ ಸಂತ್ರಸ್ತೆ ತನ್ನ ಎರಡು ವರ್ಷದ ಪುತ್ರ ಹಾಗೂ ಮಾವ ಲಕ್ಮಿನಾರಾಯಣ ಮಾತ್ರ ಮನೆಯಲ್ಲಿದ್ದರು. ಬೆಳಗ್ಗೆ 10.30 ರ ಸುಮಾರಿಗೆ ಕೋಣೆಯಲ್ಲಿ ಮಗುವನ್ನು ಮಲಗಿಸಿ ಹೊರಗಡೆ ಬರುತ್ತಿದ್ದ ಸೊಸೆಯ ಕೈಹಿಡಿದೆಳೆದ ಮಾವ ಇನ್ನೊಂದು ರೂಮಿಗೆ ಕರೆದೊಯ್ದು ಮೃಗೀಯ ರೀತಿಯಲ್ಲಿ ಮುಗಿಬಿದ್ದಿದ್ದಾನೆ. ಕಾಮುಕ ಮಾವನ ದುಷ್ಕೃತ್ಯಕ್ಕೆ ಸೊಸೆ ಪ್ರತಿರೋಧ ತೋರಿದಾಗ ಬಲಾತ್ಕಾರದಿಂದ ಲೈಂಗಿಕ ಕ್ರಿಯೆ ನಡೆಸಿದ್ದಾನೆಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾಳೆ. ತನ್ನ ಹೀನಕೃತ್ಯ ಮುಗಿಸಿದ ಕಾಮುಕ ಮಾವ ಈ ವಿಚಾರವನ್ನು ಬಾಯ್ಬಿಟ್ಟರೆ ಇಬ್ಬರು ಮಕ್ಕಳು ಹಾಗೂ ನಿನ್ನನ್ನು ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿದ್ದನೆನ್ನಲಾಗಿದೆ. ಇದಾದ ಎರಡು ದಿನಗಳ ಬಳಿಕ 11-12-2020 ರ ಬೆಳಗ್ಗೆ 11.30 ರ ಸುಮಾರಿಗೆ ಸಂತ್ರಸ್ತೆ ಕರಿಬೇವಿನ ಸೊಪ್ಪು ತರಲು ತೋಟಕ್ಕೆ ಹೋಗಿದ್ದ ಸಂದರ್ಭ ಅಲ್ಲಿಗೆ ವಕ್ಕರಿಸಿದ ಕಾಮುಕ ಮಾವ ಆಕೆಯನ್ನು ಎಳೆದು ಪಂಪುಶೆಡ್ಡಿನೊಳಗೆ ಕರೆದೊಯ್ದು ಹಿಂದಿನಿಂದ ಮೃಗೀಯ ರೀತಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿ ತೀಟೆ ತೀರಿಸಿದ ಬಗ್ಗೆ ಸಂತ್ರಸ್ತೆ ದೂರಿನಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾಳೆ. ಇದಾದ ಬಳಿಕ 19-12-2020 ರಂದು ರಾತ್ರಿ 10ಗಂಟೆಯ ಸುಮಾರಿಗೆ ಬೆಡ್‌ರೂಮಲ್ಲಿ ಮಗುವನ್ನು ಮಲಗಿಸುತ್ತಿದ್ದಾಗ ಮತ್ತೆ ವಕ್ಕರಿಸಿದ ಕಾಮುಕ ಮಾವ ಮೈಮೇಲೆ ಮುಗಿಬೀಳಲು ಮುಂದಾಗಿದ್ದಾನೆ. ಅಪಾಯವನ್ನರಿತ ಸೊಸೆ ತನ್ನ ಗಂಡ ಬರುವ ತನಕ ಮಗುವಿನೊಂದಿಗೆ ರೂಮಿನಲ್ಲಿ ಬಾಗಿಲಿನ ಚಿಲಕ ಹಾಕಿ ರಕ್ಷಿಸಿಕೊಂಡಿರುವ ಬಗ್ಗೆ ದೂರಿನಲ್ಲಿ ಸ್ಪಷ್ಟಪಡಿಸಿದ್ದಾಳೆ. ಇಷ್ಟೆಲ್ಲಾ ಮೃಗೀಯ ವರ್ತನೆ ತೋರಿದ ಗುರಿಕ್ಕಾರ ಮಾವನ ಬಗ್ಗೆ ಅತ್ತೆ ಗೀತಾರಲ್ಲಿ ಹೇಳುತ್ತಾ ಸಂತ್ರಸ್ತೆ ಕಣ್ಣೀರಿಟ್ಟಿದ್ದರೂ ಆಕೆ ಮಾತ್ರ ಇದೆಲ್ಲಾ ಮಾಮೂಲು. ಎಲ್ಲರ ಮನೆಯಲ್ಲೂ ಇದ್ದೇ ಇರುತ್ತೆ. ಅದೆಲ್ಲಾ ಹೊರಗಡೆ ಹೇಳುವ ವಿಚಾರವಲ್ಲ ಎನ್ನುತ್ತಾ ಸಹಕರಿಸದ ಸೊಸೆಯನ್ನೇ ಆರೋಪಿ ಸ್ಥಾನದಲ್ಲಿಡುತ್ತಾರೆಂದು ಸಂತ್ರಸ್ತೆ ವಿವರಿಸಿದ್ದಾಳೆ.

ಇವ ಗಂಡನಲ್ಲ…ಭಂಡ…!
ಮರುದಿನ 20-12-2020 ರಂದು ಮನೆಗೆ ಬಂದ ಗಂಡ ಶಿವರಂಜನ್ ಜೊತೆ ಸಂತ್ರಸ್ತೆ ಹಿಂದಿನ ದಿನ ಮತ್ತೆ ನಡೆದ ಕಥೆಯನ್ನೆಲ್ಲಾ ಕಣ್ಣೀರಿಡುತ್ತಾ ವಿವರಿಸಿದಾಗ ನಿನಗೆ ಹುಚ್ಚು ಹಿಡಿದಿರಬೇಕೆಂದು ಹೇಳುತ್ತಾ ಇಬ್ಬರು ಎಳೆಯ ಮಕ್ಕಳ ಜೊತೆ ತನ್ನ ತವರು ಮನೆಗೆ ತಂದು ಬಿಟ್ಟಿದ್ದಾರೆಂದು ವಿವರಿಸಿದ್ದಾಳೆ. ಮಾವನಿಂದಲೇ ಸರಣಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಮಂಗಳೂರಿನ ಮಹಿಳಾ ಠಾಣೆಗೆ ನೀಡಿರುವ ದೂರಿಗೆ ಸಂಬಂಧಿಸಿದಂತೆ ಐಪಿಸಿ ಕಲಂ 1860 ರ ಅನ್ವಯ ಸೆಕ್ಷನ್ 378, , 54, 323 ಮತ್ತು506  ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹವ್ಯಕ ಸಮುದಾಯದ ಸುಸಂಸ್ಕೃತ ಕುಟುಂಬದಲ್ಲಿ ಹುಟ್ಟಿ ಕೈರಂಗಳ ವಲಯದ ಜವಾಬ್ದಾರಿಯುತ ಗುರಿಕ್ಕಾರ ಪಟ್ಟದಲ್ಲಿರುವ ಲಕ್ಮಿನಾರಾಯಣ ಭಟ್ಟ ಆಪತ್ಕಾಲದಲ್ಲಿ ತನ್ನ ಸೊಸೆಗೆ ರಕ್ಷಣೆ ನೀಡಿ ಸಲಹಬೇಕಾಗಿತ್ತು. ಆದರೆ ಯಥಾ ರಾಜ…ತಥಾ ಪ್ರಜಾ…ಎಂಬ ಗಾದೆ ಮಾತಿಗೆ ತಾಜಾ ಉದಾಹರಣೆಯಂತಾದ ಈತನ ಮೃಗೀಯ ಕಾಮುಕತನ ಹವ್ಯಕ ಸಮಾಜವನ್ನಷ್ಟೇ ಅಲ್ಲ ಮಾನವ ಕುಲವನ್ನೇ ತಲೆತಗ್ಗಿಸುವಂತೆ ಮಾಡಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English