ದ.ಕ. ಜಿಲ್ಲಾ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ವಿಶೇಷ ಸನ್ಮಾನ

9:42 PM, Saturday, January 16th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

jds GPಮಂಗಳೂರು  : ಜಾತ್ಯತೀತ ಜನತಾದಳ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಮಾನ್ಯ ವಿಧಾನ ಪರಿಷತ್ ಶಾಸಕರಾದ ಶ್ರೀ ಬಿ.ಎಮ್. ಫಾರೂಕ್ ರವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜನತಾದಳ ವತಿಯಿಂದ ದ.ಕ. ಜಿಲ್ಲಾ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಿಲ್ಲೆಯ ಕುಪ್ಪೆಪದವು ಮತ್ತು  ಬೆಳ್ತಂಗಡಿ ತಾಲೂಕಿನ  ಹೊಸ0ಗಡಿ ಗ್ರಾಮದಿಂದ ಸ್ಪರ್ಧಿಸಿ ವಿಜಯಪತಾಕೆ ಹಾರಿಸಿದ ಸದಸ್ಯರುಗಳು ಹಾಗೂ ಕುಪ್ಪೆ ಪದವು ಗ್ರಾಮದ ಜೇಡಿಎಸ್ ಪಕ್ಷದ ಗೆಲುವಿನ ನಾಯಕತ್ವ ವಹಿಸಿದ ಡಿ.ಪಿ. ಹಮ್ಮಬ್ಬರಿಗೆ ವಿಶೇಷ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ನಾಯಕರುಗಳಾದ ಜಿಲ್ಲಾ ಕಾರ್ಯದ್ಯಕ್ಷರು ಶ್ರೀ ವಸಂತ್ ಪೂಜಾರಿ, ಜಿಲ್ಲಾ ಮಹಪ್ರಧಾನ ಕಾರ್ಯದರ್ಶಿ ಶ್ರೀ ಪ್ರವೀಣ್ ಚಂದ್ರ ಜೈನ್, ಯುವ ಜನತಾದಳ ಜಿಲ್ಲಾಧ್ಯಕ್ಷರಾದ ಶ್ರೀ ಅಕ್ಷಿತ್ ಸುವರ್ಣ, ಮಹಿಳಾ ಘಟಕಾಧ್ಯಕ್ಷೆ ಸುಮತಿ ಹೆಗ್ಡೆ, ಮಾಜಿ ಕಾರ್ಪೊರೇಟರ್ ರಮೀಝಾ ಬಾನು, ಮುನೀರ್ ಮಕ್ಕಚೇರಿ,ಪುಷ್ಪಾರಾಜ್, ಮೀರ ಸಾಹೇಬ್, ರತ್ನಾಕರ ಸುವರ್ಣ, ಯುವ ಜನತಾದಳ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೊಹಮ್ಮದ್ ಫೈಝಲ್, ಮಂಗಳೂರು ಉತ್ತರ ಅಧ್ಯಕ್ಷ ರತೀಶ್ ಕರ್ಕೇರ ಹಾಗೂ ಇತರ ಕಾರ್ಯಕರ್ತರು ಉಪಸ್ತಿತರಿದ್ದರು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English