ಪತ್ನಿಯಿಂದ ಕಿರುಕುಳ ಕೊಲೆಯತ್ನ ದೂರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ನಾಪತ್ತೆ

10:37 PM, Sunday, January 24th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

GT Dinesh Kumarಮಂಗಳೂರು :  ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಆಯುಕ್ತ ಜಿ.ಟಿ. ದಿನೇಶ್ ಕುಮಾರ್ (38) ಅವರ ವಿರುದ್ಧ ಪತ್ನಿ ಕಿರುಕುಳ ನೀಡಿದ ಹಾಗೂ ಕೊಲೆಯತ್ನ ದೂರು ನೀಡಿದ್ದಾರೆ.

ದಿನೇಶ್ ಕುಮಾರ್ ಮೂಡ ಆಯುಕ್ತರಾಗಿ ತಿಂಗಳ ಹಿಂದೆಯಷ್ಟೇ ನೇಮಕಗೊಂಡಿದ್ದರು. ಮಂಗಳೂರಿನ ಉರ್ವ ಮಾರ್ಕೆಟ್ ಬಳಿಯ ಅಗ್ರಜ ವಿವಾಂಟ ಫ್ಲಾಟ್‌ನಲ್ಲಿ ಇವರು ವಾಸವಿದ್ದರು. ಪತ್ನಿ ಬೆಂಗಳೂರಿನಲ್ಲಿ ಇದ್ದುದರಿಂದ ಇವರು ಒಬ್ಬರೇ ಇಲ್ಲಿ ವಾಸವಿದ್ದರು ಎಂದು ಹೇಳಲಾಗಿದೆ.

ಬೆಂಗಳೂರಿನ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪತ್ನಿ ದೀಪ್ತಿ ಅವರು ಕೊಲೆಯತ್ನ ಹಾಗೂ ವರದಕ್ಷಿಣೆ ಕಿರುಕುಳ ದೂರು ನೀಡಿರುವುದರಿಂದ ದಿನೇಶ್‌ಕುಮಾರ್ ದಿಢೀರ್ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ದಿನೇಶ್ ಕುಮಾರ್ ಶುಕ್ರವಾರ ಹಗಲು ವೇಳೆ ಕಚೇರಿಗೆ ಬಂದಿದ್ದರು ಬಳಿಕ  ರಾತ್ರಿಯಿಂದ ಮನೆಗೆ ಬೀಗ ಹಾಕಿ ನಾಪತ್ತೆಯಾಗಿದ್ದಾರೆ. ಎರಡನೇ ಶನಿವಾರ ರಜೆ ಇದ್ದು, ರವಿವಾರ ರಜೆ. ಹೀಗಾಗಿ ಅವರು ಬೆಂಗಳೂರಿಗೆ ಹೋಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

ಮೂಡ ಅಧ್ಯಕ್ಷರ ಸೇರಿದಂತೆ ಯಾರು ಕರೆ ಮಾಡಿದರೂ ದಿನೇಶ್ ಕುಮಾರ್ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ. ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಮೂಲತಃ ದಾವಣಗೆರೆಯವರಾದ ಇವರು 2012ರ ಕೆಎಎಸ್ ಬ್ಯಾಚ್ ನ  ಕೆಎಎಸ್ ಅಧಿಕಾರಿಯಾಗಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English