ಬೆಕ್ಕಿನ ಜೀವ ಉಳಿಸಲು ಹೋದ ಬೈಕ್ ಸವಾರನ ಮೇಲೆ, ಕಾರು ಹರಿದು ಸಾವು

11:22 PM, Wednesday, March 24th, 2021
Share
1 Star2 Stars3 Stars4 Stars5 Stars
(No Ratings Yet)
Loading...

Jishnu
ಕಾಸರಗೋಡು :  ಬೈಕ್ ಸವಾರರನ ಮೇಲೆ ಮೇಲೆ ಕಾರು ಹರಿದು ಮೃತಪಟ್ಟ ಘಟನೆ ಕಾಞ೦ಗಾಡ್ ನ ಅಲಾಮಿಪಳ್ಳಿ ಯಲ್ಲಿ ಮಾ.24ರ ಬುಧವಾರ ನಡೆದಿದೆ. ಘಟನೆಯಿಂದ ಸಹ ಸವಾರ ಗಾಯಗೊಂಡಿದ್ದಾನೆ .

ನೀಲೇಶ್ವರ ಅಂಬಲತ್ತರ ದ ಜಿಷ್ಣು (24) ಮೃತಪಟ್ಟ ಸವಾರ. ಸಹ ಸವಾರ ರಂಜಿತ್ ಗಾಯ ಗೊಂಡಿದ್ದು , ಆಸ್ಪತ್ರೆಗೆ ದಾಖಲಿಸಲಾಗಿದೆ .

ಅಡ್ಡ ಬಂದ ಬೆಕ್ಕನ್ನು ತಪ್ಪಿಸಲೆತ್ನಿಸಿದಾಗ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದಾಗ ಹಿಂಬದಿಯಿಂದ ಬಂದ ಕಾರು ಮೇಲೆ ಹರಿದು ಗಂಭೀರ ಗಾಯಗೊಂಡಿದ್ದ ರೆನ್ನಲಾಗಿದೆ.

ಗಂಭೀರ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಕೊಂಡೊಯ್ದರೂ ಜಿಷ್ಣು ಮೃತಪಟ್ಟರು. ಕಾರು ನಿಲ್ಲಿಸದೆ ಪರಾರಿಯಾಗಿದ್ದು , ನೀಲೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English