ಮಂಗಳೂರು : ಗ್ರಾಮ ಪಂಚಾಯಿತಿ ಕಚೇರಿಯ ಸಮೀಪ ಮಾಸ್ಕ್ ಹಾಕಲು ಹೇಳಿದ ಪಿಡಿಒ ಕಪಾಳಕ್ಕೊಡೆದ ಯುವಕರು

10:40 PM, Tuesday, May 25th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Rajendra Shettyಮಂಗಳೂರು : ಮಲ್ಲೂರ್ ಗ್ರಾಮ ಪಂಚಾಯಿತಿ ಸಮೀಪ ಅಲೆದಾಡುತ್ತಿದ್ದ  ಐದು ಮಂದಿ ಯುವಕರಿಗೆ  ಮಾಸ್ಕ್ ಧರಿಸುವಂತೆ ಹೇಳಿದ್ದಕ್ಕೆ ಸಾರ್ವಜನಿಕ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮೇಲೆ  ಮೇ 25 ರ ಮಂಗಳವಾರ ದಂದು  ಕಪಾಳಕ್ಕೊಡೆದು ಹಲ್ಲೆ ಮಾಡಲಾಗಿದೆ ಎಂದು ದೂರು ನೀಡಲಾಗಿದೆ.

ಪಿಡಿಒ ರಾಜೇಂದ್ರ ಶೆಟ್ಟಿ ಅವರು ಗ್ರಾಮ ಪಂಚಾಯಿತಿ ಕಚೇರಿಯ ಸಮೀಪದಲ್ಲಿದ್ದ ಐದು ಮಂದಿ ಯುವಕರಿಗೆ ಮಾಸ್ಕ್  ಧರಿಸಿ ಕೋವಿಡ್ -19 ಮಾರ್ಗಸೂಚಿಗಳನ್ನು ಪಾಲಿಸುವಂತೆ ಕೇಳಿದ್ದರು ಎಂದು ಹೇಳಲಾಗಿದೆ. ಆದರೆ ಅಬೂಬಕರ್  ಎಂಬ ವ್ಯಕ್ತಿ  ಇತರ ನಾಲ್ವರೊಂದಿಗೆ ಸೇರಿ  ಪಿಡಿಒ ಮುಖದ ಮೇಲೆ  ಹಲ್ಲೆ ನಡೆಸಿದರು ಎಂದು ದೂರು ನೀಡಲಾಗಿದೆ,

ಈ ಸಂಬಂಧ ಮಂಗಳೂರು ಗ್ರಾಮೀಣ ಪೊಲೀಸರು ಕರ್ನಾಟಕ ಸಾಂಕ್ರಾಮಿಕ ಕಾಯ್ದೆಯ ಐಪಿಸಿ ಸೆಕ್ಷನ್ 332, 504, 34 ಮತ್ತು ಸೆಕ್ಷನ್ 5 (1) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English