ಮಂಗಳೂರು : ಕರ್ನಾಟಕ ಸರಕಾರದ ಕಾರ್ಮಿಕ ಇಲಾಖೆಯ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಮುಚ್ಚೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಮುಚ್ಚೂರು ಮಿಥಿಲಾ ಸಭಾಭವನದಲ್ಲಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರಿಂದ ಆಹಾರ ಸಾಮಾಗ್ರಿ ಕಿಟ್ ವಿತರಣೆ ಮಂಗಳವಾರ ನಡೆಯಿತು.
ಜನಾರ್ಧನ ಗೌಡ, ನಿಕಟಪೂರ್ವ ಸದಸ್ಯರು ಜಿ. ಪ, ನಾಗೇಶ್ ಶೆಟ್ಟಿ ತಾಲೂಕು ಪಂಚಾಯತ್ ಸದಸ್ಯರು,ಮೋಹಿನಿ ಅಧ್ಯಕ್ಷರು ಗ್ರಾಮ ಪಂಚಾಯತ್, ನಾರಾಯಣ ಉಪಾಧ್ಯಕ್ಷರು, ಮಾಜಿ ಅಧ್ಯಕ್ಷರಾದ ವೀರಪ್ಪ ಗೌಡ, ಪ್ರಕಾಶ್ ಹೆಗ್ಡೆ, ಸದಸ್ಯರಾದ ರೂಪೇಶ್,ರೇಖಾ ರಜನೀಶ್, ಜಯಂತಿ ನಾಯ್ಕ್, ಅಂಗನವಾಡಿ ಮೇಲ್ವಿಚಾರಕಾರದ ಮಾಲಿನಿ, ಮಾಜಿ ಪಂಚಾಯತ್ ಸದಸ್ಯರಾದ ಪ್ರಕಾಶ್ ಶೆಟ್ಟಿ,ಲೀಲಾವತಿ, ಪ್ರಮುಖರಾದ ಯೋಗೀಶ್ ಪಲ್ಕೆ, ಕುಮಾರ ವಿವೇಕ ನಗರ,ವರುಣ ಮೇಲ್ಮನೆ, ಕೇಶವ ಮುಚ್ಚೂರು, ಜಗದೀಶ್ ಕೊಂಪದವು, ಪ್ರಶಾಂತ್ ಶೆಟ್ಟಿ, ಪ್ರಕಾಶ್ ಕೀಲೆ ಭಾಗವಹಿದ್ದರು. ಒಟ್ಟು 377 ಮಂದಿಗೆ ಕಿಟ್ ಒದಗಿಸಲಾಯಿತು. ಪಿ..ಡಿ. ಒ. ಜಲಜಾಕ್ಷಿಯವರು ಸ್ವಾಗತಿಸಿದರು. ಕಾರ್ಯದರ್ಶಿ ಸತೀಶ್ ಕಾರ್ಯಕ್ರಮ ನಿರ್ವಹಿಸಿದರು.ಪಂಚಾಯತ್ ಸಿಬ್ಬಂದಿ ಹೇಮಾ ವಂದಿಸಿದರು. ಸಿಬ್ಬಂದಿಗಳಾದ ರಮೇಶ್, ನಾಗರತ್ನ ಸಹಕರಿಸಿದರು.
Click this button or press Ctrl+G to toggle between Kannada and English