ಸಂಬಳ ಕೇಳಲು ಬಂದ ನೌಕರನ ಮೇಲೆ ಹಾರಿಸಿದ ಗುಂಡು ಮಗನಿಗೆ ತಗುಲಿ ಗಂಭೀರ

8:02 PM, Tuesday, October 5th, 2021
Share
1 Star2 Stars3 Stars4 Stars5 Stars
(No Ratings Yet)
Loading...

vaishnavi-cargoಮಂಗಳೂರು : ಪಾರ್ಸೆಲ್ ಸಾಗಾಟದ  ವೈಷ್ಣವಿ ಎಕ್ಸ್ ಪ್ರೆಸ್ ಕಾರ್ಗೋ ಪ್ರೈ. ಲಿ.  ಸಂಸ್ಥೆಯ ನೌಕರರ ಸಂಬಳ ಕೇಳಿದ್ದಕ್ಕೆ, ಮಾಲೀಕ ಗುಂಡು ಹಾರಿಸಿದಾಗ ಅದು ಮಗನ ತಲೆಗೆ ತಾಗಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ನಗರದ ಮೊರ್ಗನ್ಸ್ ಗೇಟ್ ಬಳಿ ಮಂಗಳವಾರ ಸಂಜೆ ನಡೆದಿದೆ.

ಸಂಬಳ ಕೇಳಲು ಬಂದ ನೌಕರನ ಮೇಲಿನ ಸಿಟ್ಟಿನಲ್ಲಿ ಸಂಸ್ಥೆಯ ಮಾಲೀಕ ರಾಜೇಶ್ ಪ್ರಭು ಎರಡು ಸುತ್ತು ಗುಂಡು ಹಾರಿಸಿದ್ದರು,  ಅದನ್ನು ತಡೆಯಲು ಬಂದ ತನ್ನ ಮಗನ ಮೇಲೆಯೇ ಗುಂಡು‌ ತಗುಲಿದೆ ಎನ್ನಲಾಗಿದೆ.

ಕೋಷಿಷ್ಟ ಸ್ವಭಾವದವರಾಗಿರುವ ರಾಜೇಶ್ ಪ್ರಭು ಸಿಟ್ಟಿನಿಂದ ಈ ಹಿಂದೆಯೂ ಪಿಸ್ತೂಲ್ ತೆಗೆದು ಎರಡು ಬಾರಿ ಹೆದರಿಸಿದ್ದರು. .ಆದರೆ ಈ ಬಾರಿ ಅದು ಮಿಸ್ ಫೈರ್ ಆಗಿ ಅವರ ಪುತ್ರ ಸುಧೀಂದ್ರನ ತಲೆಯ ಭಾಗಕ್ಕೆ ತಗುಲಿದೆ.

ಘಟನೆಯಲ್ಲಿ ಸುಧೀಂದ್ರ ಗಂಭೀರವಾಗಿ ಗಾಯಗೊಂಡಿದ್ದಾನೆ. ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

vaishnavi-cargo

vaishnavi-cargo

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English