ಪೆಟ್ರೋಲ್ ಬಂಕ್‌ನ ಮ್ಯಾನೇಜರ್ ದರೋಡೆ, ಮಾಜಿ ಉದ್ಯೋಗಿ ಸೇರಿ, ನಾಲ್ವರ ಬಂಧನ

10:06 PM, Tuesday, October 5th, 2021
Share
1 Star2 Stars3 Stars4 Stars5 Stars
(No Ratings Yet)
Loading...

Petrol Bunkಮಂಗಳೂರು : ಆರ್ಶೀವಾದ್ ಪೆಟ್ರೋಲ್ ಬಂಕ್‌ನ ಮ್ಯಾನೇಜರ್ ಗೆ ಬ್ಯಾಟ್‌‌ನಿಂದ ಹಲ್ಲೆ ನಡೆಸಿ, 4.20 ಲಕ್ಷ ರೂ. ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪೆಟ್ರೋಲ್ ಬಂಕ್‌ನ ಮ್ಯಾನೇಜರ್ ಬೋಜಪ್ಪನವರು ಸೆಪ್ಟೆಂಬರ್ 28 ರಂದು ಹಣ ಕಟ್ಟಲು ಬ್ಯಾಂಕಿಗೆ ಹೋಗುತ್ತಿದ್ದಾಗ ಘಟನೆ ನಡೆದಿತ್ತು.

ಬಂಧಿತ ಆರೋಪಿಗಳನ್ನು ಶಕ್ತಿನಗರದ ಶ್ಯಾಮ್ ಶಂಕರ್, ಕುಡುಪು ಮೂಲದ ಅಭಿಷೇಕ್, ಕಾರ್ತಿಕ್ ಮತ್ತು ಸಾಗರ್ ಎಂದು ಗುರುತಿಸಲಾಗಿದೆ.

ಘಟನೆಯ ಬಗ್ಗೆ  ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಆರೋಪಿ  ಶ್ಯಾಮ್ ಶಂಕರ್ ಅದೇ ಪೆಟ್ರೋಲ್ ಪಂಪ್‌ನಲ್ಲಿ ಹಲವು ವರ್ಷಗಳಿಂದ ಉದ್ಯೋಗಿಯಾಗಿದ್ದು ಆತ ಮತ್ತು ಇತರ ಆರೋಪಿಗಳು ಸೆಪ್ಟೆಂಬರ್ 13 ರಂದು ಶಕ್ತಿನಗರದಲ್ಲಿ ದರೋಡೆ ಮಾಡಲು ಯೋಜಿಸಿದ್ದರು. ಆದರೆ ಅದು ವಿಫಲವಾದ ಹಿನ್ನಲೆಯಲ್ಲಿ ಸೆಪ್ಟೆಂಬರ್ 28 ರಂದು ದರೋಡೆ ಮಾಡಿ ಮುಂಬೈಗೆ ತೆರಳಿದ್ದಾರೆ.

ಮೂವರು ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದು ಇದರಲ್ಲಿ ಕೊಲೆ, ಗಲಭೆ, ಸುಲಿಗೆ ಸೇರಿದ್ದು, ಆರೋಪಿಗಳು ಹಣವನ್ನು ಮುಂಬೈನಲ್ಲಿ ಹಸ್ತಾಂತರಿಸಿದ್ದಾರೆ ಮತ್ತು ಕೆಲವು ವಸ್ತುಗಳನ್ನು ಖರೀದಿಸಿದ್ದಾರೆ ಎಂದು ಹೇಳಲಾಗಿದೆ. ಅಪರಾಧದಲ್ಲಿ ಸಹಾಯ ಮಾಡಿದವರನ್ನು ಒಳಗೊಂಡಂತೆ ಇನ್ನೂ ಹೆಚ್ಚಿನ ಬಂಧನಗಳನ್ನು ಮಾಡಬೇಕಾಗಿದೆ ಆರೋಪಿಯಿಂದ 60,00 ರೂಪಾಯಿ ನಗದು, ವಾಹನ ಮತ್ತು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English